ಬೆಂಗಳೂರು:
ಹೃದಯಘಾತದಿಂದ ನಿಧನರಾದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಅಂತಿಮ ವಿಧಿ ವಿಧಾನಗಳು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿದ್ದು, ಪಂಚಭೂತಗಳಲ್ಲಿ ಲೀನಾರಾಗಿದ್ದಾರೆ.
ಹಿಂದೂ ಬ್ರಾಹ್ಮಣ ಸಂಪ್ರಾದಾಯದಂತೆ ರವಿ ಬೆಳಗೆರೆಯವರ ಅಂತಿಮ ವಿಧಿ ವಿಧಾನವನ್ನ ಪುತ್ರ ಕರ್ಣ ಮತ್ತು ಹಿಮವಂತ ನೆರೆವೇರಿಸಿದರು.
ಸುಮಾರು ಒಂದು ಟನ್ ಸೌದೆಯಿಂದ ಸಿದ್ಧಪಡಿಸಲಾಗಿದ್ದ ಚಿತೆಗೆ ಪುತ್ರ ಕರ್ಣ ಮತ್ತು ಹಿಮವಂತನಿ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಬೆಳಗೆರೆಯ ಯುಗಾಂತ್ಯವಾಗಿದ್ದು, ಅವರು ತಮ್ಮ ಕುಟುಂಬದ ಸಹಿತ ಅಪಾರ ಆಭಿಮಾನಿಗಳನ್ನ ಆಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ