ಶಿರಾಡಿಘಾಟ್ : ಅ.3 ರಿಂದ ಬಸ್‍ಸಂಚಾರಕ್ಕೆ ಮುಕ್ತ

ಪುತ್ತೂರು:

 

      ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶಿರಾಡಿಘಾಟ್‍ನ ರಸ್ತೆಯನ್ನು ಅಕ್ಟೋಬರ್ 3 ರಿಂದ ಬಸ್ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಧಿಲ್ ಅವರು ತಿಳಿಸಿದ್ದಾರೆ.

      ಒಟ್ಟು 12 ಕಡೆ ಭೂಕುಸಿತ ಉಂಟಾಗಿತ್ತು. ಈ ಪೈಕಿ 8 ಕಡೆಗಳಲ್ಲಿ ಸದ್ಯಕ್ಕೆ ಅಪಾಯವಿಲ್ಲ. 4 ಕಡೆಗಳಲ್ಲಿ ಅಪಾಯವಿದ್ದು, ಅಂತಹ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

      ಪುತ್ತೂರು ತಾಲ್ಲೂಕಿನ ಗುಂಡ್ಯ ಮತ್ತು ಸಕಲೇಶ್ವರ ನಡುವಿನ ಶಿರಾಢಿಘಾಟ್‍ನ ರಸ್ತೆಯು ಹಾಳಾಗಿದ್ದು, ಈಗ ಆ ರಸ್ತೆಗೆ ಕಾಂಕ್ರಿಟ್ ಹಾಕಲಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿದ್ದು, ಲಾರಿ ಸೇರಿದಂತೆ ಬಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ, ಬಸ್‍ಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap