ಶಿವಮೊಗ್ಗ ; ತೀರ್ಥಹಳ್ಳಿ ಬಳಿ ಲಾರಿ ಪಲ್ಟಿ ; 10 ಹಸುಗಳ ಸಾವು!!

ಶಿವಮೊಗ್ಗ :   

     ಜಾನುವಾರು ಸಾಗಣೆ ಮಾಡುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ 10 ಜಾನುವಾರುಗಳು ಸ್ಥಳದಲ್ಲಿಯೇ ಸಾವಿಗೀಡಾಗಿರುವ ದುರ್ಘಟನೆ ತೀರ್ಥಹಳ್ಳಿ ತಾಲೂಕು‌ ದಾನಸಾಲೆ ಬಳಿ ಸಂಭವಿಸಿದೆ.

      ದಾವಣಗೆರೆಯಿಂದ ಮಂಗಳೂರು ಕಡೆ ಹೊರಟಿದ್ದ ಕ್ಯಾಂಟರ್ ಬೆಳಗಿನಜಾವ ಪಲ್ಟಿಯಾಗಿದೆ. ಕ್ಯಾಂಟರ್​ನಲ್ಲಿ 20 ಜಾನುವಾರುಗಳಿದ್ದು, ಇದರಲ್ಲಿ‌ 10 ಸಾವಿಗೀಡಾಗಿದ್ದು, ಉಳಿದವು ಗಾಯಗಳಾಗಿವೆ.

      ವಾಹನದಲ್ಲಿ ಹಲಗೆ ಹಾಸಿ, ಅದರೊಂದಿಗೆ ಹಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಅಪಘಾತ ನಡೆದ ಬಳಿಕ ಲಾರಿಯಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ.

      ಕ್ಯಾಂಟರ್​ನಲ್ಲಿದ್ದ ಜಾನುವಾರುಗಳನ್ನು ಅಕ್ರಮವಾಗಿ ಸಾಗಣೆ ನಡೆಸಲಾಗುತ್ತಿತ್ತಾ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap