ಗದಗ : ಮುಸ್ಲಿಂ ಕಲಾವಿದನಿಂದ ಶ್ರೀ ರಾಮನ ಜಪ!!

ಗದಗ :

       ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲನ್ಯಾಸ ಹಿನ್ನಲೆ, ದೇಶದೆಲ್ಲೆಡೆ ಶ್ರೀರಾಮನ ಜಪ, ತಪ ನಡೆಯುತ್ತಿದೆ. ಅದೇರೀತಿ ಮುಸ್ಲಿಂ ಕಲಾವಿದನೋರ್ವ ಶ್ರೀರಾಮನ ಪಾದ ಹಾಗೂ ಹನುಮನ ಚಿತ್ರ ಬಿಡಿಸುವ ಮೂಲಕ ರಾಮಲಲ್ಲಾನ ಜಪಕ್ಕೆ ಮುಂದಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

        ನಗರದ ಅಮರೇಶ್ವರ ಕಾಲೋನಿಯ ಮುನಾಫ್ ಹರ್ಲಾಪುರ ಎಂಬ ಮುಸ್ಲಿಂ ಹಿರಿಯ ಕಲಾವಿದನೋರ್ವರು ಶ್ರೀರಾಮನ ಭಕ್ತನಾಗಿದ್ದು, ಚರ್ತುಭುಜ ಮಂಡಲದ‌ಲ್ಲಿ ಶ್ರೀ ರಾಮನ ಪಾದಗಳ ಚಿತ್ರ ಬಿಡಿಸಿ ಅದಕ್ಕೆ ಆಂಜನೇಯ ನಮಸ್ಕರಿಸುವ ರೀತಿನಲ್ಲಿ ಚಿತ್ರಬೀಡಿಸಿ ಭಕ್ತಿಗೆ ಪಾತ್ರರಾಗಿದ್ದಾರೆ.

        ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮ ಮ೦ದಿರ ನಿಮಾ೯ಣ ಸಮಾರ೦ಭದ ಭೂಮಿ ಪೂಜೆಯಲ್ಲಿ ಪಾಲ್ಗೊಂಡ ವೇಳೆ, ಇತ್ತ ಮುಸ್ಲಿಂ ಕಲಾವಿದ ತನ್ನ ಮನೆಯಲ್ಲಿ ಈ ತರನಾದ ಚಿತ್ರಗಳನ್ನು ಬಿಡಿಸುವ ಮೂಲಕ ತನ್ನ ಕಲೆಯನ್ನು ಅಭಿವ್ಯಕ್ತಪಡಿಸಿರುವುದು ಹೆಮ್ಮೆಯ ವಿಷಯ.
ಮಂಡಲದ ಮಧ್ಯೆ ರಾಮನ ಪಾದಗಳ‌ ಚಿತ್ರ ಬಿಡಿಸಿ, ಸುತ್ತಲು ಜೈಶ್ರೀರಾಮ್ ಎಂದು ಬರೆದುಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap