ಬೆಂಗಳೂರು ಗೊರಗುಂಟೆಪಾಳ್ಯ ಮೇಲ್ಸೇತುವೆಗೆ ಸಿದ್ಧಗಂಗಾ ಶ್ರೀ ಹೆಸರು!!

ಬೆಂಗಳೂರು:

      ಗೊರಗುಂಟೆ ಪಾಳ್ಯ ಮೇಲ್ಸೇತುವೆಗೆ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಅಧಿಕೃತವಾಗಿದ್ದು, ಸೆ.21ರಂದು ನಾಮಕರಣ ನಡೆಯಲಿದೆ.

      ಬೆಂಗಳೂರು ಉತ್ತರ ಹೆಬ್ಬಾಗಿಲು ಎಂದೇ ಹೇಳಲಾಗುವ ನಗರದ ಗೊರಗುಂಟೆ ಪಾಳ್ಯದಿಂದ ಕೆನ್ನಮೆಟಲ್ ಕಾರ್ಖಾನೆವರೆಗಿನ ಮೇಲು ಸೇತುವೆಗೆ ಶಿವಕುಮಾರಸ್ವಾಮೀಜಿ ನಾಮಕರಣ ಮಾಡಕಾಗುತ್ತಿದೆ.Image result for goraguntepalya flyover

       ಸೆ.21ರಂದು ಅಂದರೆ ನಾಳೆ ಸಂಜೆ 5.30ಕ್ಕೆ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಮತ್ರಿ ಬಿಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಡಿವಿ ಸದಾನಂದಗೌಡ ಹಾಗೂ ಉಪಮುಖ್ಯಮಂತ್ರಿ , ಮೇಯರ್ ಗಂಗಾಂಬಿಕೆ ಆಗಮಿಸಲಿದ್ದಾರೆ.

      ನಗರದಲ್ಲಿ ಮೊದಲ ಬಾರಿಗೆ ಒಂದು ಮೇಲ್ಸೇತುವೆಗೆ ಶಿವಕುಮಾರಸ್ವಾಮೀಜಿ ಹೆಸರು ನಾಮಕರಣ ಮಾಡಲಾಗುತ್ತಿದೆ. ಬೆಂಗಳೂರಿಗೆ ಆಗಮಿಸುವ ಉತ್ತರ ಭಾಗದ ಜನಕ್ಕೆ ಗೊರಗುಂಟೆಪಾಳ್ಯದ ಮೇಲು ಸೇತುವೆಯೇ ಹೆಬ್ಬಾಗಿಲು. ಹೀಗಾಗಿ ಈ ಸೇತುವೆಗೇ ಶಿವಕುಮಾರಸ್ವಾಮೀಜಿ ಹೆಸರಿಡಬೇಕೆಂದು ಮೇಯರ್ ಪ್ರಸ್ತಾಪಿಸಿ, ಕೌನ್ಸಿಲ್‌ನಲ್ಲಿ ನಿರ್ಣಯವನ್ನೂ ಮಾಡಿಸಿದರು. ಹಾಗೆಯೇ ಸರ್ಕಾರದಿಂದ ಒಪ್ಪಿಗೆಯನ್ನೂ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link