ಸಿದ್ಧಗಂಗಾ ಶ್ರೀಗಳು ಮಠಕ್ಕೆ ವಾಪಸ್ : ಸಂತಸದ ವಾತಾವರಣ!

ತುಮಕೂರು: 

      ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಚೆನ್ನೈನ ರೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದ ಶ್ರೀಗಳು ಗುಣಮುಖರಾಗಿ ಇಂದು ಶ್ರೀಮಠಕ್ಕೆ ವಾಪಸ್ಸಾಗಿದ್ದಾರೆ. 

      ಚೆನ್ನೈನಿಂದ ಎಚ್​ಎಎಲ್​ಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಶ್ರೀಗಳನ್ನು ಝೀರೋ ಟ್ರಾಫಿಕ್​ ವ್ಯವಸ್ಥೆಯಲ್ಲಿ ವಿಶೇಷ ಆಂಬುಲೆನ್ಸ್​ನಲ್ಲಿ ಮಠಕ್ಕೆ ಕರೆತರಲಾಯಿತು.

      ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಠಕ್ಕೆ ಆಗಮಿಸಿದ ಶ್ರೀಗಳು ನೇರವಾಗಿ ಹಳೇ ಮಠದ‌ ಕೊಠಡಿಗೆ ತೆರಳಿದರು. ಕೊಠಡಿಯಲ್ಲಿ ಸಕಲ‌ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಶಿವಪೂಜೆ ನೆರವೇರಿಸಲಿದ್ದಾರೆ. ಶಿವಪೂಜೆ ಬಳಿಕ ದ್ರವ ಆಹಾರ ಸೇವಿಸಲಿದ್ದಾರೆ. ಶ್ರೀಗಳ ಹಳೆ ಕೊಠಡಿಯನ್ನು ಸ್ಪೆಷಲ್ ವಾರ್ಡ್ ರೀತಿಯಲ್ಲಿ ಸಿದ್ಧಪಡಿಸಿರುವ ವೈದ್ಯರು ಅಲ್ಲಿಯೇ ಶ್ರೀಗಳಿಗೆ ಚಿಕಿತ್ಸೆ ನೀಡಲಿದ್ದಾರೆ.

      ಈ ಹಿನ್ನೆಲೆ ಶ್ರೀಮಠದಲ್ಲಿ ಭಕ್ತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಠದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap