ಪ್ರಸಾದದಲ್ಲಿ ವಿಷ : ಫುಡ್ ಪಾಯ್ಸನ್ ಅಲ್ಲ, ವಿಷ ಪ್ರಾಶನ!!

ಮೈಸೂರು:

      ಮಾರಮ್ಮನ ದೇಗುಲದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ 15 ಕ್ಕೂ ಹೆಚ್ಚು ಮರಣ ಹೊಂದಿರುವ  ಈ ಘೋರ ಘಟನೆ ಫುಡ್ ಪಾಯಿಸನ್‌ನಿಂದ ಸಂಭವಿಸಿದ್ದಲ್ಲ, ಬದಲಿಗೆ ಯಾರೋ ಪಾತಕಿಗಳು ವಿಷ ಬೆರೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

      ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ, ದೇವಸ್ಥಾನದಲ್ಲಿ ಪ್ರಸಾದ ಸೇವನೆಯಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಅವರು, ದೇಗುಲದ ಪ್ರಸಾದ ಸೇವಿಸಿ ಮಗು ಸಹಿತ 12 ಜನ ಸಾವನ್ನಪ್ಪಿದ್ದು, 80ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘೋರ ಘಟನೆ ಪುಡ್ ಪಾಯಿಸನ್‌ನಿಂದ ಸಂಭವಿಸಿದ್ದಲ್ಲ, ಬದಲಿಗೆ ಯಾರೋ ಪಾತಕಿಗಳು ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಘೋರ ದುರಂತಕ್ಕೆ ಕಾರಣರಾಗಿರುವ ಪಾತಕಿಗಳಿಗೆ ಶಿಕ್ಷೆಯಾಗಲೇಬೇಕು, ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.

      ಮಾಜಿ ಸಿಎಂ ಜೊತೆ ಸಚಿವ ಜಮೀರ್​ ಅಹಮ್ಮದ್​, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡಾ ಆಗಮಿಸಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap