ಬೆಂಗಳೂರು :
ಸಾವಿರಾರು ಜನರಿಗೆ ಕೋಟ್ಯಾಂತರ ರೂ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಬಂಧಿಸಲು ಶೀಘ್ರದಲ್ಲೇ ರಾಜ್ಯ ವಿಶೇಷ ತನಿಖಾ ತಂಡವು ದುಬೈಗೆ ಹಾರಲು ನಿರ್ಧರಿಸಿದೆ ಎನ್ನಲಾಗಿದೆ.
ಮನ್ಸೂರ್ ವಿರುದ್ಧ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ ಪರಿಣಾಮ ದುಬೈ ಬಿಟ್ಟು ಬೇರೆ ದೇಶಗಳಿಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಲ್ಲದೇ ದುಬೈನಲ್ಲಿರುವ ಖಚಿತ ಮಾಹಿತಿ ಮೇರೆಗೆ ದುಬೈಗೆ ತೆರಳಲು ಪಾಸ್ ಪೋರ್ಟ್, ವೀಸಾ ರೆಡಿ ಮಾಡಿಕೊಂಡು ಸಿದ್ದರಾಗಿರಿ ಎಂದು ಅಧಿಕಾರಿಗಳಿಗೆ ಎಸ್ ಐಟಿ ಮುಖ್ಯಸ್ಥರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜಾರಿ ನಿರ್ದೆಶನಾಲಯವು ಈಗಾಗಲೇ ಐಎಂಎ ಗ್ರೂಪ್ ಗೆ ಸೇರಿದ ಎಲ್ಲಾ ಪ್ರಾಪರ್ಟಿಗಳ ಮೇಲೆ ರೈಡ್ ಮಾಡಿಸಿ ಜಪ್ತಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ