ಬೆಂಗಳೂರು:
ಕೆಎಸ್ಆರ್ಟಿಸಿ ಬಸ್ ಮೀಟರ್ ಬೋರ್ಡ್ನಲ್ಲಿ ಹೆಬ್ಬಾವಿನ ಮರಿ ಕಾಣಿಸಿಕೊಂಡ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಲಾಕ್ಡೌನ್ನಿಂದಾಗಿ ಕಳೆದ 2 ತಿಂಗಳಿನಿಂದ ಸಂಚಾರ ಬಂದ್ ಆಗಿತ್ತು. ಈಗ ಮತ್ತೆ ಬಸ್ ಸಂಚಾರ ಶುರು ಆಗಿದೆ. ಮಂಗಳವಾರ ಬೆಂಗಳೂರಿಗೆ ಮೊದಲ ಟ್ರಿಪ್ ಬಸ್ ಬಂದಿತ್ತು. ಮಂಗಳೂರಿನಲ್ಲಿ ಬಸ್ ನಿಲ್ಲಿಸಿದ್ದಾಗ ಇಂಜಿನ್ ಬಳಿ ಹೆಬ್ಬಾವಿನ ಮರಿ ಆಶ್ರಯ ಪಡೆದಿರಬಹುದು ಎನ್ನಲಾಗುತ್ತಿದೆ. ಸ್ಯಾನಿಟೈಸರ್ ಮಾಡಲು ರಾಸಾಯನಿಕ ಸಿಂಪಡನೆ ವೇಳೆ ಹೆಬ್ಬಾವಿನ ಮರಿ ಹೊರಬಂದಿದೆ.
ಹಾವನ್ನ ಕಂಡು ಗಾಬರಿಗೊಂಡ ಕೆಎಸ್ಆರ್ಟಿಸಿ ಸಿಬ್ಬಂದಿ, ತಕ್ಷಣ ಬಿಬಿಎಂಪಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕರೆ ಮಾಡಿ ವಿಷಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಬಿಬಿಎಂಪಿ ಅರಣ್ಯಸಂರಕ್ಷಣಾ ಘಟಕದ ಸಿಬ್ಬಂದಿ ರಾಜೇಶ್ ಬಸ್ ನಿಲ್ದಾಣಕ್ಕೆ ಆಗಮಿಸಿ, ಹೆಬ್ಬಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/06/Pyth-ksrtc.gif)