ಕೊಪ್ಪಳ:
ಮಲಗಿದ್ದ ಹೆತ್ತ ತಂದೆ-ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ.
ಸಾವನ್ನಪ್ಪಿರುವ ತಾಯಿಯನ್ನು ಅಕ್ಕಮ್ಮ (55) ಎಂದೂ, ತಂದೆಯನ್ನು ಗಿರಿಯಪ್ಪ (60) ಎಂದು ಗುರುತಿಸಲಾಗಿದೆ. ಆರೋಪಿ ಮಗ ರಮೇಶ್ ಕೊಲೆ ಮಾಡಿದ್ದಾನೆ.
ಆರೋಪಿ ರಮೇಶ್ ಪತ್ನಿ ತವರು ಮನೆ ಹೋಗಿದ್ದರು. ಈ ವೇಳೆ ಪೋಷಕರಿಗೆ ಆರೋಪಿ ರಮೇಶ್ ಪತ್ನಿಯನ್ನು ಮನೆಗೆ ಕರೆದುಕೊಂಡು ಬರುವಂತೆ ಒತ್ತಾಡ ಹಾಕುತ್ತಿದ್ದನು. ಆಗ ತಂದೆ ಗಿರಿಯಪ್ಪ ನೀನು ಮೊದಲು ಕೆಲಸ ಮಾಡು ನಂತರ ಕರೆದುಕೊಂಡು ಬರುತ್ತೀವಿ ಎಂದು ಹೇಳಿದ್ದರು. ರಾತ್ರಿ ಇದರಿಂದ ಕೋಪಗೊಂಡ ಆರೋಪಿ ರಮೇಶ್ ಸೋಮವಾರ ಮಲಗಿದ್ದ ಸಮಯದಲ್ಲಿ ಮಾರಕಾಸ್ತ್ರಗಳಿಂದ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ.
ಪರಿಣಾಮ ತಾಯಿ ಅಕ್ಕಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಗಿರಿಯಪ್ಪನನ್ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆಯಲ್ಲಿ ಗಿರಿಯಪ್ಪ ಸಾವನ್ನಪ್ಪಿದ್ದಾರೆ.
ಪ್ರಪಂಚದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ-ತಾಯಿ ಅಂತ ನಾವು ಬಹಳ ಸಲ ಕೇಳಿದ್ದೀವಿ. ಆದರೆ ಇಲ್ಲೊಬ್ಬ ಪಾಪಿ ಮಗ ತನ್ನ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಮನ ಕಲಕುವಂತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
