ಬೆಂಗಳೂರು:
ನಾನು ಸಂವಿಧಾನದ ಮೇಲೆ ಅತ್ಯಾಚಾರ ಮಾಡೋದಿಲ್ಲ, ನನಗೆ ಸಂವಿಧಾನವೇ ಅಂತಿಮ, ಸಂವಿಧಾನ ಪ್ರಕಾರವೇ ನಾನು ನಡೆದುಕೊಳ್ಳುವುದು ಅಂತ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಇಂದು ಬೆಂಗಳೂರಿನ ದೊಮ್ಮಲ್ಲೂರಿನಲ್ಲಿರುವ ತಮ್ಮ ನಿವಾಸದಿಂದ ವಿಧಾನಸಭಾ ಅಧಿವೇಶನಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ರಾಜ್ಯದ ಪ್ರಜೆಗಳ ಮನಸಿನ ನೋವುಗಳಿಗೆ ಬೆಲೆ ಕೊಡ್ತಿನಿ. ಆದರೆ, ಯಾರ ಖುಷಿಗೆ, ಅಸಂತೋಷಕ್ಕೆ ನಾನು ಕುಣಿಯಲ್ಲ. ಯಾಕಂದ್ರೆ ನಾನು ನೃತ್ಯಗಾರ್ತಿ ಅಲ್ಲ. ಸಂವಿಧಾನದ ಆಶಯದಂತೆ ನಡೆಯುತ್ತೇನೆ. ಸಂವಿಧಾನಕ್ಕೆ ಅಪಚಾರ, ಅತ್ಯಾಚಾರ ಮಾಡೋದಿಲ್ಲ. ನಿಮ್ಮ ಹಾಗೂ ಯಾರ ಒತ್ತಡಕ್ಕು ನಾನು ಮಣಿಯೋದಿಲ್ಲ. ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ನಿಮ್ಮ ಮೇಲೆ ಶಾಸಕರ ಇನ್ನಿಲ್ಲದ ಆರೋಪ ಮಾಡುತ್ತಿದ್ದು ಈ ಬಗ್ಗೆ ನಿಮ್ಮ ಮಾತೇನು ಅಂತ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದ ವೇಳೆಯಲ್ಲಿ ಗಾಂಧಿ ಕೊಂದ ದೇಶವಿದು, ನನ್ನ ಬಿಡ್ತಾರಾ? ಗಾಂಧಿಯವರು ಸತ್ತಿರಬಹುದು ಆದರೆ ಅವರ ಮೌಲ್ಯಗಳು ಯಾವುತ್ತು ಕೂಡ ಸಾಯೋದಿಲ್ಲ. ಇನ್ನು ಇಂದು ಸುಪ್ರೀಂ ಕೋರ್ಟ್ ತನ್ನ ಕೆಲಸ ಮಾಡಲಿ, ತೀರ್ಪು ನೋಡಿಕೊಂಡು, ಆಮೇಲೆ ಏನು ಮಾಡಬೇಕು ನೋಡೋಣ ಅಂತ ಹೇಳಿದ ಅವರು ಸಂವಿಧಾನಕ್ಕೆ ತಕ್ಕಂತೆ ನಾನು ನಡೆದುಕೊಳ್ಳುವೆ ಅಂತ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/07/K-R-Ramesh-Kumar-DH.gif)