ಬೆಂಗಳೂರು:
‘ರಾಜ್ಯದ ಹಿತಾಸಕ್ತಿ ಪರ ಬ್ಯಾಟ್ ಬೀಸದ ಬಿಜೆಪಿ ಸಂಸದರು ಪೇಪರ್ ಹುಲಿಗಳಿದ್ದಂತೆ’ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಪ್ರವಾಹ ಸಂತ್ರಸ್ಥ ರೈತನೊರ್ವ ಪರಿಹಾರ ಸಿಕ್ಕಿಲ್ಲ ಎಂದು ನೊಂದು ಆತ್ಮಹತ್ಯೆಗೆ ಶರಣಾಗಿದ್ದು ಈ ಘಟನೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ಪ್ರವಾಹದಿಂದ ತತ್ತರಿಸಿರುವ ಕರ್ನಾಟಕ ರೈತರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ. ರಾಜ್ಯದ ಹಿತಾಸಕ್ತಿ ಪರ ಬ್ಯಾಟ್ ಬೀಸದ ಬಿಜೆಪಿ ಸಂಸದರು ಕೇವಲ ಪೇಪರ್ ಹುಲಿಗಳು, ಪ್ರಧಾನಿ ಮೋದಿ ಬಳಿ ರಾಜ್ಯಕ್ಕೆ ಪರಿಹಾರ ಕೇಳಲು ಬಿಜೆಪಿ ಸಂಸದರು ಹೆದರುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
Our strong battalion of Karnataka BJP MPs have failed our farmers. Zero funds released so far for #KarnatakaFloods
BJP MPs are just paper tigers unable to bat for state interests. Why are they so afraid to ask PM anything for the state? How many more people need to die? https://t.co/jQsl67NR3G— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 3, 2019
ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ಕೊಡಿಸಲು ಸಂಸದರು ವಿಫಲರಾಗಿದ್ದಾರೆ. ಪ್ರಧಾನಿಯವರ ಬಳಿ ಪರಿಹಾರ ಕೇಳಲು ಹೆದರುತ್ತಿರುವುದು ಏಕೆ? ರಾಜ್ಯದಲ್ಲಿ ಇನ್ನು ಎಷ್ಟು ನೆರೆ ಸಂತ್ರಸ್ತರು ಸಾಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/03/BL29_STATES_PRIYANK_KHARGE_.jpg)