ವಿಜಯಪುರ:
ವೆಲ್ಡಿಂಗ್ ಮಾಡುವಾಗ ಎಥೆನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ ನಾಡಗೌಡ ರೋಡ್ಲೈನ್ಸ್ನಲ್ಲಿ ನಡೆದಿದೆ.
ರಾಜು ಹಾಗೂ ಪ್ರಕಾಶ ಟೋನಿ ಮೃತಪಟ್ಟ ಕಾರ್ಮಿಕರು. ರೋಡ್ಲೈನ್ಸ್ ಗ್ಯಾರೇಜ್ನಲ್ಲಿ ಈ ಇಬ್ಬರು ಯುವಕರು ಕೆಲಸ ಮಾಡುತ್ತಿದ್ದರು.
ಎಥಿನಾಲ್ ಖಾಲಿ ಮಾಡಿದ ಬಳಿಕ ಟ್ಯಾಕರ್ನ್ನು ಗ್ಯಾರೇಜ್ಗೆ ತಂದು ವೆಲ್ಡಿಂಗ್ ಮಾಡಿಸಲಾಗುತ್ತಿತ್ತು. ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಸ್ಫೋಟದ ತೀವ್ರತೆಗೆ ಇಬ್ಬರೂ ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದಾರೆ. ವಿಶ್ವಾನಾಥ ಬಡಿಗೇರ, ಪ್ರಕಾಶ ಶಿರೋಳ ಹಾಗೂ ಬಸವರಾಜ ಡೊಣೂರ ಎಂಬುವವರಿಗೆ ಸಣ್ದಪುಟ್ಟ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅವರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ.
![](https://prajapragathi.com/wp-content/uploads/2019/12/tanker-blast.gif)