ನಾಳೆಯಿಂದ ಏ.14ರ ವರೆಗೆ ಬಡವರಿಗೆ ಉಚಿತ ಹಾಲು!!

ಬೆಂಗಳೂರು :

      ನಾಳೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಡವರಿಗೆ ಹಾಗೂ ಸ್ಲಂಗಳಲ್ಲಿ ವಾಸಿಸುವ ಬಡವರಿಗೂ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

      ಕರೋನಾ ಭೀತಿಯಿಂದಾಗಿ ದೇಶದಾದ್ಯಂತ ಏಪ್ರಿಲ್‌ 14 ರವರೆಗೆ ಲಾಕ್‌ ಡೌನ್‌ ಘೋಷಿಸಲಾಗಿದ್ದು, ಇದರನ್ವಯ ರಾಜ್ಯದಲ್ಲೂ ಸಂಪೂರ್ಣ ಬಂದ್‌ ಆಗಿದೆ. ಇದರ ಪರಿಣಾಮ ಕರ್ನಾಟಕ ಹಾಲು ಒಕ್ಕೂಟದಲ್ಲಿ ಪ್ರತಿನಿತ್ಯ 7 ಲಕ್ಷ ಲೀಟರ್ ಹಾಲು ಉಳಿತಾಯವಾಗುತ್ತಿದ್ದು, ಇದು ದುರುಪಯೋಗವಾಗದಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

     ಇದರ ಅನ್ವಯ ಸರ್ಕಾರವೇ ಉಳಿದ ಹಾಲನ್ನು ಖರೀದಿಸಲಿದೆ. ಏ.14ರವರೆಗೆ ಈ ಹಾಲನ್ನು ಬಡವರಿಗೆ ಸರ್ಕಾರ ಉಚಿತವಾಗಿ ಹಂಚಲಿದೆ. ಯಾವ ಯಾವ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಾಲು ಉಳಿತಾಯವಾಗುತ್ತಿದೆಯೋ ಆ ಜಿಲ್ಲಾಧಿಕಾರಿಗಳಿಗೆ ಉಳಿತಾಯವಾದ ಹಾಲು ಖರೀದಿಸಿ ಜಿಲ್ಲೆಯ ಬಡವರಿಗೆ ಉಚಿತವಾಗಿ ವಿತರಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap