ಬೆಳಗಾವಿ:
ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಖಾನಾಪುರ ಘಟನೆ ತಾಲ್ಲೂಕಿನ ದೇಸೂರು ಗ್ರಾಮದ ಹೊರವಲಯದ ಬೆಳಗಾವಿ- ಖಾನಾಪುರ ರಸ್ತೆ
ಜಾರ್ಖಂಡ್ ಮೂಲದ ಅರ್ಜುನ್ ಸಿಂಗ್ (21), ದುರ್ಗೇಶ್ ಕುಮಾರ್ (22) ಮೃತರು. ಮತ್ತೊಬ್ಬ ಹೆಸರು ತಿಳಿದು ಬಂದಿಲ್ಲ.
ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಅಗೆಯುವ ಕಾಮಗಾರಿ ನಡೆಯುತ್ತಿತ್ತು. ತಗ್ಗಿನಲ್ಲಿ ನಿಂತಿದ್ದ ಅವರ ಮೇಲೆ ಏಕಾಏಕಿ ಮಣ್ಣು ಕುಸಿದಿದೆ ಎಂದು ತಿಳಿದು ಬಂದಿದೆ.
ಜೆಸಿಬಿಯಿಂದ ಮಣ್ಣು ತೆಗೆದು ಶವ ಹೊರತೆಗೆಯುವ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ