ಈಶ್ವರಪ್ಪ ವಿರುದ್ಧ ಮಂಗಳಮುಖಿಯರ ಆಕ್ರೋಶ!!

ಬೆಂಗಳೂರು :

     ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳಮುಖಿಯರ ಜೊತೆ ವಸಂತ ನಗರದಲ್ಲಿರುವ ಸಚಿವ ಈಶ್ವರಪ್ಪ ನಿವಾಸದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

      ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೆ.ಎಸ್‌. ಈಶ್ವರಪ್ಪ “ಮುಸಲ್ಮಾನರ ಮತ ಪಡೆಯುವ ಶಾಸಕರು ಹಿಜಿಡಾಗಳು” ಎಂಬ ಹೇಳಿಕೆ ನೀಡಿದ್ದರು.

      ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಕಾಂಗ್ರೆಸ್‌ ಮುಖ್ಯಸ್ಥೆ ಪುಷ್ಪ ಅಮರನಾಥ್, ನಿಮ್ಮ ನಾಲಿಗೆ ಚಪ್ಪಲಿನಾ ಅಥವಾ ನಾಲಿಗೆನಾ ಎಂದು ಕೇಳಲು ಬಯಸುತ್ತೇವೆ ಎಂದರು.

     ಅಖಿಲ ಭಾರತ ಮಹಿಳಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಅಪ್ಸರಾ ರೆಡ್ಡಿ ಮಾತನಾಡಿ, ನಾವು ಅತ್ಯಂತ ಕೆಳವರ್ಗದ ಜನ ನಮ್ಮ ಬಗ್ಗೆ ಹೀಗೆ ಹೇಳಿಕೆ ನೀಡಬಾರದು. ನಾವು ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದೇವೆ. ಇವರು ಕೂಡ ಫ್ಯಾಮಿಲಿ ವ್ಯಕ್ತಿಯಾಗಿದ್ದು ಅವರ ಸ್ಥಾನಕ್ಕೆ ಅಗೌರವ ತರುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇವರ ಹೇಳಿಕೆ ಅವಹೇಳನಕಾರಿಯಾಗಿದೆ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

      ನಂತರ ಪ್ರತಿಭಟನಾ ನಿರತ  ಮಹಿಳಾ ಕಾಂಗ್ರೇಸ್ಸಿಗರು ಹಾಗೂ ಮಂಗಳಮುಖಿಯರನ್ನು ಪೋಲಿಸರು ವಶಕ್ಕೆ ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap