ತುಮಕೂರು:
ತಂದೆ ಡ್ರೈವಿಂಗ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದ ಬಾಲಕನಿಗೆ ತುಮಕೂರು ಪೊಲೀಸರು ನಗದು ಬಹುಮಾನ ನೀಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹುಳಿಯಾರು ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಟಾಟಾ ಎಸಿ ವಾಹನದಲ್ಲಿ ಮಿಕ್ಸಿಯನ್ನು ತುಂಬಿದ್ದ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದ ಕೊರಟಗೆರೆ, ಅಳಾಲಸಂದ್ರ ಗ್ರಾಮದ ವಾಸಿ ಡ್ರೈವರ್ ಶಿವಕುಮಾರ್ ರವರು ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು, ತಂದೆ ಶಿವಕುಮಾರ್ ಜೂತೆಯಲ್ಲೇ ಬರುತ್ತಿದ್ದ ಶಿವಕುಮಾರ್ ರವರ 8 ವರ್ಷದ ಮಗ ಪುನೀತ್ ಕುಮಾರ್ ತಕ್ಷಣ ತನ್ನ ಸಮಯ ಪ್ರಜ್ಞೆ ಯಿಂದ ಎದರುಗಡೆ ಬರುತ್ತಿದ್ದ ವಾಹನಗಳನ್ನು ಗಮನಿಸಿ ಸ್ಟರಿಂಗ್ ಅನ್ನು ರಸ್ತೆಯ ಎಡ ಪಕ್ಕಕ್ಕೆ ವಾಹನವನ್ನು ನಿಲ್ಲಿಸಿ, ಮುಂದೆ ಆಗ ಬಹುದಂತಹ ಅನಾಹುತ ತಪ್ಪಿಸಿದ್ದಾನೆ.
ಈ ಬಾಲಕನ ಸಮಯ ಪ್ರಜ್ಞೆ ಮೆಚ್ಚಿ ತುಮಕೂರಿನ ಎಸ್ಪಿ ಡಾ ಕೆ.ವಂಶಿ ಕ್ರಿಷ್ಣ , ಐಪಿಎಸ್ ರವರು ನಗದುಬಹುಮಾನವನ್ನು ನೀಡಿ ಪ್ರಶಂಸಿಸಿದರು. ಈ ಸಮಯದಲ್ಲಿ ಬಾಲಕನ ತಾಯಿ, ತಾತ, ಮತ್ತು ಆತನ ತಮ್ಮ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/WhatsApp-Image-2019-05-01-at-2.33.58-PM.jpeg)