ತುಮಕೂರು :
ನಾಲ್ಕೈದು ಜನ ರೌಡಿಶೀಟರ್ ಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಗ್ರಾಮದ ತುಂಬ ಓಡಾಡಿಕೊಂಡು ನಾಲ್ಕು ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಊರುಕೆರೆ ಗ್ರಾಮದಲ್ಲಿ ನಡೆದಿದೆ.
ರೌಡಿಶೀಟರ್ ಗಳಾದ ಜಗದೀಶ, ಮಂಜುನಾಥ, ಕೃಷ್ಣಪ್ಪ, ಪುರುಷೋತ್ತಮ್ ಮತ್ತು ಅವರ ಹಿಂಬಾಲಕರಾದ ಅಕ್ಷಯ್ ರಘು ಮಚ್ಚು-ಲಾಂಗ್ ಗಳನ್ನ ಹಿಡಿದು ಗ್ರಾಮದ ತುಂಬೆಲ್ಲಾ ಓಡಾಡಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದು, ರೌಡಿಶೀಟರ್ ಗಳ ಅಟ್ಟಹಾಸಕ್ಕೆ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.
ರೌಡಿ ಕೃಷ್ಣಪ್ಪ ಕಾರು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆ ರಾಜಣ್ಣ ಎಂಬುವವರಿಗೆ ಟಚ್ ಆಗಿದ್ದು, ಇದನ್ನ ಪ್ರಶ್ನಿಸಿದ ಕಾರಣಕ್ಕೆ ರೌಡಿಗಳಲ್ಲರೂ ಗ್ರಾಮದ ತುಂಬ ಅಟ್ಟಡಿಸಿಕೊಂಡು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ರೌಡಿ ಶೀಟರ್ ಗಳು ಗ್ರಾಮಸ್ಥರಾದ ರಾಜಣ್ಣ, ರಂಗಣ್ಣ, ಪುಟ್ಟನರಸಮ್ಮ , ಸುನಿಲ್ ಎಂಬುವವರ ಮೇಲೆ ಮಚ್ಚಿನಿಂದ ಎದೆ ಮತ್ತು ಹೊಟ್ಟೆಗೆ ಹಲ್ಲೆ ಮಾಡಲಾಗಿದ್ದು, ಎಲ್ಲರೂ ಗಂಬೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪ್ರತ್ರೆಗೆ ದಾಖಲಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
