ತುಮಕೂರು : ಪಾಲಿಕೆ ಆವರಣದಲ್ಲಿ ವಿದ್ಯುತ್ ಸ್ಪರ್ಶಿಸಿ ಪೌರಕಾರ್ಮಿಕನ ಸಾವು!!

ತುಮಕೂರು :

       ವಿದ್ಯುತ್ ತಂತಿಸ್ಪರ್ಶ ಪೌರಕಾರ್ಮಿಕ ಸ್ಥಳದಲ್ಲೆ ಸಾವನ್ನಪ್ಪಿರುವ ದುರ್ಘಟನೆ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ನಡೆದಿದೆ.

       ನರಸಿಂಹಮೂರ್ತಿ ಮೃತ ಪೌರಕಾರ್ಮಿಕ. ಆಯುಧ ಪೂಜೆ ಹಾಗು ದಸರಾ ಉತ್ಸವದ ಪ್ರಯುಕ್ತ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನ ತೆರವುಗೊಳಿಸುವಂತೆ ಪಾಲಿಕೆ ಸೂಚನೆ ನೀಡಿತ್ತು. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಈ ದುರ್ಘಟನೆ ಸಂಭಿವಿಸಿದೆ ಎನ್ನಲಾಗಿದೆ.

        ಈ ವೇಳೆ ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೇಯರ್ ಹಾಗೂ ಜಿಲ್ಲಾಧಿಕಾರಿ ಬರುವವರೆಗೂ ಮೃತ ಕಾರ್ಮಿಕನ ಶವವನ್ನು ಸ್ಥಳದಿಂದ ಕದಲಿಸುವುದಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap