ತುಮಕೂರು :
ಕರ್ತವ್ಯ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಪಾವಗಡ ಠಾಣಾ ಪಿಎಸ್ಐ ರಾಘವೇಂದ್ರ ಅಮಾನತು ಮಾಡಿ ಎಸ್ ಪಿ ಕೋನ ವಂಶಿಕೃಷ್ಣ ಆದೇಶ ಹೊರಡಿಸಿದ್ದಾರೆ.
ವಂಚನೆ, ಕಳ್ಳತನ, ಜೇಬುಗಳ್ಳತನ ಸೇರಿದಂತೆ ಹಲವು ದೂರನ್ನ ದಾಖಲಿಸದೇ ನಿರ್ಲಕ್ಷ್ಯ ತೋರಿದ ಆರೋಪ ಹೊತ್ತಿದ್ದ ಪಿಎಸ್ಐ ರಾಘವೇಂದ್ರ ರವರ ಬಗ್ಗೆ ತನಿಖೆ ನಡೆಸಿದ ಎಸ್ಪಿ ಕೋನ ವಂಶಿಕೃಷ್ಣ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು ಫೆಬ್ರವರಿ ೧ ರಂದು ಜಯನಗರ ಪಿಎಸ್ಐ ಮುತ್ತುರಾಜ್ ಅವರನ್ನು ಎಸ್ಪಿ ಕೋನ ವಂಶಿಕೃಷ್ಣ ರವರು ಅಮಾನತುಗೊಳಿಸಿದ್ದರು. ಈ ಮೂಲಕ ೧೨ ದಿನದಲ್ಲಿ ಇಬ್ಬರು ಪಿಎಸ್ಐ ವಿರುದ್ದ ಕ್ರಮ ಕೈಗೊಂಡಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/Untitled-6-e1581579659454.gif)