ತುಮಕೂರು :
ತಾಲೂಕಿನ ಕೊಂತಿಹಳ್ಳಿ ಗ್ರಾಮದ ನಿವಾಸಿಯಾದ ರವಿ ಎಂಬುವವರ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಸುಮಾರು 8 ಅಡಿ ಉದ್ದದ ಹೆಬ್ಬಾವನ್ನೂ ಅರಣ್ಯ ಇಲಾಖೆ, ವಾರ್ಕೋ ಹಾಗೂ ವಾರಿಯರ್ ಸಂಸ್ಥೆಯವರಿಂದ ಸಂರಕ್ಷಿಸಿ ಕಾಡಿಗೆ ಬಿಡಲಾಯಿತು.
ಮುಂಬರುವ ಬೇಸಿಗೆ ಕಾಲ ಸಮಯದಲ್ಲಿ ಈ ರೀತಿ ಕಾಡು ಪ್ರಾಣಿಗಳು ಹಾಹಾರ ಅರಸಿ ನಾಡಿಗೆ ಬರುವುದು ಸಹಜ ಆದುದರಿಂದ ಕಾಡುಪ್ರಾಣಿಗಳಿಗೆ ಯಾವುದೇ ತೊಂದರೆ ಕೊಡೋದೆ ದೂರ ನಿಂತು ಗಮನಿಸಿ ಕೂಡಲೇ ಅರಣ್ಯ ಇಲಾಖೆ ಟೋಲ್ ಫ್ರೀ ಸಂಖ್ಯೆ 1926 ಅಥವಾ ವಾರ್ಕೊ ಸಂಸ್ಥೆಯ ಸಹಾಯವಾಣಿ ಸಂಖ್ಯೆ: 7259450016, 9663758530ಕರೆ ಮಾಡಿ ಮಾಹಿತಿ ನೀಡಬೇಕೆಂದು ಜನರಲ್ಲಿ ವಿನಂತಿಸಿದರು.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೇಜಸ್.ಅರ್.ಮಾಗಡ್ಡಯ್ಯ ಹಾಗೂ ವರ್ಕೋ ಸಂಸ್ಥೆಯ ಬಾಲಮುರಳಿ, ನವೀನ್, ನಾಗಾರ್ಜುನ್ ಹಾಗೂ ವಾರಿಯರ್ ತಂಡದ ಸಾಮ್ಯುಲ್ ಬೆಂಜಮಿನ್ ರವರು ತೊಡಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/11/snake-catch-e1604381089519.jpeg)