ಧಾರವಾಡ :
ಪತ್ರಕರ್ತರ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರು ನಕಲಿ ಪತ್ರಕರ್ತರನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅನ್ವರ್ ಕೆ.ಜಮಾದಾರ ಮತ್ತು ನಿಜಾಮ ಅಬ್ದುಲ್ ಸಾಬ್ ಪಟೇಲ್ ಬಂಧಿತ ಆರೋಪಿಗಳು. ಬೆಳಗಾವಿ ಮೂಲದ ಇವರು ಜಮ್ಮು ಕಾಶ್ಮೀರದ ಟಿ.ವಿ ಚಾನೆಲ್ ಒಂದರ ಹೆಸರು ಹೇಳಿಕೊಂಡು ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಆಗ್ರೋ ಫುಡ್ಸ್ ಸಂಸ್ಥೆಯ ಉಪ್ಪಿನಕಾಯಿ ಕಂಪನಿಗೆ ಭೇಟಿ ನೀಡಿ, ಲಾಕ್ ಡೌನ್ ಉಲ್ಲಂಘಿಸಿ ಉಪ್ಪಿನಕಾಯಿ ಫ್ಯಾಕ್ಟರಿ ತೆಗೆದಿದ್ದಕ್ಕೆ ಬೆದರಿಸಿ 25 ಸಾವಿರ ರೂಪಾಯಿ ವಸೂಲಿಗೆ ಇಳಿದಿದ್ದಾರೆ.
ಆದರೆ ಉಪ್ಪಿನಕಾಯಿ ಕೃಷಿ ಸಂಬಂಧಿತ ಕೈಗಾರಿಕೆ ವ್ಯಾಪ್ತಿಗೆ ಬರುತ್ತದೆ ಎಂಬ ಸಾಮಾನ್ಯ ಜ್ಞಾನ ಕೂಡ ಇವರಿಗೆ ಇರಲಿಲ್ಲ. ಇವರ ಚಲನವಲನಗಳನ್ನು ನೋಡಿದ ಕಂಪನಿ ಇವರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದೆ.
ಇವರು ಅನುಮತಿಯಿಲ್ಲದೆ, ಕಾರ್ ನಲ್ಲಿ ಬೆಳಗಾವಿ ಜಿಲ್ಲೆಯಿಂದ ಧಾರವಾಡದವರೆಗೆ ಆಗಮಿಸಿದ್ದರು ಎನ್ನುವುದು ಗೊತ್ತಾಗಿದೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Arrest.gif)