ಚಿಕ್ಕಮಗಳೂರು :
ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರೊಂದು ರಸ್ತೆಯ ತಿರುವಿನಲ್ಲಿದ್ದ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಟ್ಟದ ಮಳಲಿ ಗ್ರಾಮದಲ್ಲಿ ನಡೆದಿದೆ.
38 ವರ್ಷದ ಮಂಜುನಾಥ್ ಹಾಗೂ 62 ವರ್ಷದ ಗೋವಿಂದಶೆಟ್ಟಿ ಮೃತ ದುರ್ದೈವಿಗಳು. ಮೃತರು ಬೆಟ್ಟದ ಮಳಲಿ ನಿವಾಸಿಗಳು ಎಂದು ಹೇಳಲಾಗುತ್ತಿದೆ.
ಟ್ರಾಕ್ಟರ್ ಕಣತಿಯಿಂದ ಬೆಟ್ಟದ ಮಳಲಿಗೆ ಬರುವ ವೇಳೆಯಲ್ಲಿ ಟ್ರಾಕ್ಟರ್ ಚಾಲಕನ ನಿಯಂತ್ರಣಕ್ಕೆ ಸಿಕ್ಕಲ್ಲ. ಈ ವೇಳೆ ತಿರುವಿನಲ್ಲಿದ್ದ ಮನೆಗೆ ಟ್ರ್ಯಾಕ್ಟರ್ ಏಕಾಏಕಿ ನುಗ್ಗಿದೆ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದಾರೆ.
ಈ ಸಂಬಂಧ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
