ಚಿತ್ರದುರ್ಗ : ಆಸ್ತಿಗಾಗಿ ಚಿಕ್ಕಪ್ಪನಿಂದಲೇ 7 ವರ್ಷದ ಬಾಲಕನ ಹತ್ಯೆ!!

ಚಿತ್ರದುರ್ಗ :

      ಆಸ್ತಿಯ ಆಸೆಯಿಂದ ಸ್ವಂತ ಚಿಕ್ಕಪ್ಪನೇ ತನ್ನ ಅಣ್ಣನ ಮಗನಾದ 7 ವರ್ಷದ ಬಾಲಕನನ್ನು ಕೊಲೆ ಮಾಡಿ ಹಳ್ಳಕ್ಕೆ ಬಿಸಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೋಸೇದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ.

      ರಂಗಸ್ವಾಮಿಯವರ ಪುತ್ರ ಗೋವಿಂದ್(7) ತನ್ನ ಚಿಕ್ಕಪ್ಪನಿಂದಲೇ ಹತ್ಯೆಯಾದ ದುರ್ದೈವಿ. ರಂಗಸ್ವಾಮಿ ಸಹೋದರ ಚಿರಂಜೀವಿ ಬಾಲಕನಿಗೆ ಪಾರಿವಾಳದ ಆಸೆ ತೋರಿಸಿ ಕರೆದೊಯ್ದು, ನೀರಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. 

      ಚಿರಂಜೀವಿ ಅವರ ತಂದೆ ತನ್ನ ಆಸ್ತಿಯನ್ನು ಮೊಮ್ಮಕ್ಕಳ ಹೆಸರಿಗೆ ಬರೆಯುವುದಾಗಿ ಹೇಳಿದ್ದರು. ಈ ವಿಚಾರ ತಿಳಿದ ಚಿರಂಜೀವಿ ತನಗೆ ಎಲ್ಲಿ ಆಸ್ತಿ ಕೈ ತಪ್ಪುತ್ತದೋ ಎಂಬ ದುರಾಲೋಚನೆಯಿಂದ ಅಣ್ಣನ ಮಗ ಗೋವಿಂದನನ್ನು ಕೊಲೆ ಮಾಡಲು ಸಂಚು ರೂಪಿಸಿ 3 ದಿನಗಳ ಹಿಂದೆ ಗೋವಿಂದನನ್ನು ಕತ್ತು ಹಿಸುಕಿ ಸಾಯಿಸಿ ಗೋಣಿ ಚೀಲದಲ್ಲಿ ಶವ ಕಟ್ಟಿ ಗ್ರಾಮದ ಸ್ಮಶಾನದ ಹಳ್ಳದಲ್ಲಿ ಬಿಸಾಡಿ ಬಂದಿದ್ದನು.

       ಇತ್ತ ಗೋವಿಂದ ನಾಪತ್ತೆಯಾಗಿರುವ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದಾಗ ನಿನ್ನೆ ಮಧ್ಯಾಹ್ನ ಹಳ್ಳದಲ್ಲಿ ಅನುಮಾನಸ್ಪದ ಮೂಟೆ ಪತ್ತೆಯಾದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

       ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿ ಚಿರಂಜೀವಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap