ಪಟೇಲ್ ಪ್ರತಿಮೆಯಂತೆಯೇ ನಿರ್ಮಾಣವಾಗಲಿದೆ ಬೃಹತ್ ರಾಮನ ಪ್ರತಿಮೆ

ಅಯೋಧ್ಯೆ:
Image result for yogi adityanath
    ರಾಮನ ಪ್ರತಿಮೆ ನಿರ್ಮಾಣ ಮಾಡುವುದಕ್ಕಾಗಿ ಈಗಾಗಲೇ ಎರಡು ಜಾಗಗಳನ್ನು ಅಂತಿಮಗೊಳಿಸಲಾಗಿದ್ದು, ರಾಮಜನ್ಮಭೂಮಿ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
     ಈಗಾಗಲೇ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ದೇವಾಲಯವಿದೆ. ಅದನ್ನು ಹೇಗೆ ಅದ್ಧೂರಿಯಾಗಿ ರೂಪಿಸಬಹುದು ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

      ದೀಪಾವಳಿ ಆಚರಣೆ ವೇಳೆ ಸರಯೂ ನದಿ ತೀರದಲ್ಲಿ ರಾಮನ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆಯೂ ಮಾತನಾಡಿರುವ ಯೋಗಿ ಆದಿತ್ಯನಾಥ್, ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣವಾಗಲಿದ್ದು, ಅದು ಪ್ರವಾಸಿಗರ ಆಕರ್ಷಣೆಯಾಗಲಿದೆ. ಪ್ರತಿಮೆ ಎಲ್ಲಿ ನಿರ್ಮಾಣವಾಗಬೇಕು ಎಂಬುದನ್ನು ಸ್ಥಳ ಪರಿಶೀಲನೆ ಮಾಡಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

       ಆ ಪ್ರತಿಮೆ ಅಯೋಧ್ಯೆಯ ಹೆಗ್ಗುರುತಾಗಲಿದೆ. ಅಯೋಧ್ಯೆಗೆ ಹೊಸ ಗುರುತನ್ನು ನೀಡುವ ರೀತಿಯಲ್ಲಿ ರಾಮನ ಪ್ರತಿಮೆಯನ್ನು ವಿನ್ಯಾಸ ಮಾಡಲಾಗುವುದು. ರಾಮಮಂದಿರದ ಒಳಾಂಗಣದಲ್ಲಿ ಪ್ರತಿಮೆ ನಿರ್ಮಿಸಲಿದ್ದು, ಇತ್ತೀಚೆಗೆ ಲೋಕಾರ್ಪಣೆಗೊಂಡ ಉಕ್ಕಿನ ಮನುಷ್ಯ ಸರ್ದಾರ್​ ಪಟೇಲ್​ ಅವರ ಪ್ರತಿಮೆಯಂತೇ ಇದೂ ಬೃಹತ್​ ಯೋಜನೆಯಾಗಿಲಿದೆ ಎಂದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link