ಯಾವುದೇ ಭಯಬೇಡ, ನಾವು ಸರ್ಕಾರ ಅಸ್ಥಿರಗೊಳಿಸಲ್ಲ : ಬಿ.ಎಸ್.ವೈ

ಬೆಂಗಳೂರು: 

       ಕಾಂಗ್ರೆಸ್, ಜೆಡಿಎಸ್​ನವರಿಗೆ ಯಾವುದೇ ಭಯಬೇಡ. ನಾವು ಸರ್ಕಾರ ಅಸ್ಥಿರಗೊಳಿಸುವುದಿಲ್ಲ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

      ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ನಮ್ಮ ಶಾಸಕರು ವಾಪಸ್ ಬರುತ್ತಾರೆ. ನಾವು ಯಾವುದೇ ಕಾರಣಕ್ಕೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈಹಾಕಲ್ಲ. ನಮ್ಮ ಮುಂದಿನ ಕೆಲಸ ಬರ ಅಧ್ಯಯನ ಮಾಡುವುದು. ವಿಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಎಂದು ಹೇಳಿದ್ದಾರೆ. 

     6 ದಿನಗಳಿಂದ ಹರಿಯಾಣದ ಗುರುಗ್ರಾಮದ ರೆಸಾರ್ಟ್​ನಲ್ಲಿ ಉಳಿದುಕೊಂಡಿದ್ದ ಬಿಜೆಪಿ ಶಾಸಕರು ಇಂದು ಮಧ್ಯಾಹ್ನದೊಳಗೆ ರಾಜ್ಯಕ್ಕೆ ವಾಪಸ್​ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap