ಕೆ ಆರ್ ಪೇಟೆ
ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ಬಸ್ ಡಿಫೋ ಹಿಂಭಾಗದಲ್ಲಿ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸಾವಿಗೆ ಶರಣು…
ಪಟ್ಟಣದ ವರ್ತಕ ಕೆ.ಆರ್.ಚಂದ್ರಶೇಖರ್ ಅವರ ಪುತ್ರ ಕೆ.ಸಿ.ವಿಶ್ವನಾಥ(33) ಎಂಬ ದುರ್ದೈವಿಯೇ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಸಂತೇಬಾಚಹಳ್ಳಿ ಬಳಿ ರಂಗನಾಥಪುರ ಕ್ರಾಸ್ ನಲ್ಲಿರುವ ಅದಾನಿ ಸೋಲಾರ್ ಪ್ಲಾಂಟ್ ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಿಶ್ವನಾಥ ನಿಗೆ ಮೂರು ತಿಂಗಳ ಹಿಂದೆ ಬೈಕ್ ಅಪಘಾತವಾಗಿ ಕಾಲು ಮುರಿದು ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದರು.
ನಿನ್ನೆ ಬೆಳಿಗ್ಗೆಯಿಂದ ಕಾಣೆಯಾಗಿದ್ದ ವಿಶ್ವನಾಥನ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಶವದ ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತನ ತಂದೆತಾಯಿಗಳು ಹಾಗೂ ಬಂಧುಗಳ ರೋಧನವು ಮುಗಿಲು ಮುಟ್ಟಿತ್ತು…ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಸಾರ್ವಜನಿಕರು ಮೃತ ಯುವಕನ ದೇಹವನ್ನು ವೀಕ್ಷಿಸಿ ಮರುಕ ಪಡುತ್ತಿದ್ದುದು ಕಂಡು ಬಂದಿತ್ತು…
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/WhatsApp-Image-2018-11-22-at-11.40.45-AM.jpeg)