ಬೆಳಗಾವಿ :
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜ ಸ್ತಂಭ ನಿಲ್ಲಿಸಿ ಕನ್ನಡ ಧ್ವಜ ಹಾರಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿರುವ ಘಟನೆ ನಡೆದಿದೆ.
ಕಳೆದ ಹಲವು ದಶಕಗಳಿಂದ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ನೆಟ್ಟು, ಕನ್ನಡ ಧ್ವಜ ಹಾರಿಸಬೇಕು ಕನ್ನಡಿಗರ ಹೋರಾಟ, ಬೇಡಿಕೆಯಾಗಿತ್ತು. ಅದಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ.
ಇಂದು ಪೊಲೀಸರ ವಿರೋಧದ ನಡುವೆಯೂ ಕನ್ನಡ ಧ್ವಜ ಹಾರಿಸಿ, ನಾಡಗೀತೆ ಹಾಡಿ ಹೋರಾಟಗಾರರು ಕನ್ನಡತನ ಮೆರೆದರು. ಈ ವೇಳೆ ಹೋರಾಟಗಾರರನ್ನು ತಡೆಯಲು ಪೊಲೀಸರು ಮುಂದಾದರೂ, ಆದರೆ ಇದಕ್ಕೆ ಅವಕಾಶ ನೀಡದ ಹೋರಾಟಗಾರರು ಪಾಲಿಕೆ ಎದುರೇ ಪ್ರತಿಭಟನೆ ನಡೆಸಿದರು.
ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ಪರ ಸಂಘಟನೆಗಳ ಸದಸ್ಯರು ಇತಿಹಾಸ ಬರೆದರು.
ಇದರಿಂದಾಗಿ ಮಹಾನಗರ ಪಾಲಿಕೆ ಎದುರು ಹೈಡ್ರಾಮಾ ನಡೆಯಿತು. ಪೊಲೀಸರು ಮೊಳೆ, ಸುತ್ತಿಗೆಗಳನ್ನು ವಶಕ್ಕೆ ಪಡೆದುಕೊಂಡರು. ಪೊಲೀಸರು ಅವರನ್ನು ಸ್ಥಳದಿಂದ ಕಳಿಸಲು ಪ್ರಯತ್ನ ನಡೆಸಿದರು. ಆಗ ವಾಗ್ವಾದ ಆರಂಭವಾಯಿತು. ಕ್ಷಣಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
