ಬಾಗಲಕೋಟೆ:
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದಿನಿಂದ ಎರಡು ದಿನಗಳ ಕಾಲ ಕ್ಷೇತ್ರ ಪ್ರವಾಸ ಕೈಗೊಳ್ಳಲಿದ್ದಾರೆ.ಕೆಲ ದಿನಗಳ ಹಿಂದಷ್ಟೆ ಯುರೋಪ್ ಪ್ರವಾಸ ಮುಗಿಸಿ ಬಂದ ಮೇಲೆ ತಮ್ಮ ರಾಜಕೀಯ ತವರು ಬಾದಾಮಿ ಕಡೆ ಮುಖ ಮಾಡಿದ್ದು, ಅವರ ವಾಸ್ತವ್ಯಕ್ಕಾಗಿ ಸುಮಾರು 20 ಲಕ್ಷ ರೂ. ಖರ್ಚು ಮಾಡಿ ಗೃಹ ಕಚೇರಿಯನ್ನು ಸಿದ್ಧ ಪಡಿಸಲಾಗಿದೆ.
ಮಾಜಿ ಸಿಎಂಗೆ ಅವರ ಗೃಹ ಕಚೇರಿ ಮಾಡಲು ಮನೆ ಸಿಕ್ಕಿರಲ್ಲಿಲ್ಲ, ಹೀಗಾಗಿ ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಅವರ ಮನೆಯನ್ನೇ ತಮ್ಮ ಗೃಹ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ.ಸಿದ್ಧರಾಮಯ್ಯನವರ ದಯೆಯಿಂದ ಎಂಜಿನಿಯರ್ ಮನೆಗೆ ಈಗ ನವೀಕರಣ ಭಾಗ್ಯ ಸಿಕ್ಕಿದ್ದೆ ಮತ್ತು ಕ್ಷೇತ್ರದ ಜನರ ಕಷ್ಟ ಆಲಿಸಲು ಅನುಕೂಲವಾಗಲಿದೆ ಎಂದು ತಿಳೀಸಿದ್ದಾರೆ, ಬರೀ ಎರಡು ದಿನದ ಪ್ರವಾಸಕ್ಕೆ ಹೊಸ ಗೃಹ ಕಚೇರಿ ಬೇಕಿತ್ತೆ ಎಂಬುದು ಸಾ್ವಜನಿಕರ ಪ್ರಶ್ನೆಯಾಗಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/Siddaramaiah-cm.gif)