ಹುಂಡಿ ಕದಿಯುವುದನ್ನು ತಡೆದ ಸೆಕ್ಯೂರಿಟಿಯ ಕೊಲೆ!!

ಮಂಡ್ಯ :

     

     ದೇವಾಲಯದ ಹುಂಡಿಯನ್ನು ದೋಚಲು ಬಂದ ಕಳ್ಳರನ್ನು ತಡೆದ ಕಾವಲುಗಾರನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ನಡೆದಿದೆ.

      ಬಸವಯ್ಯ (60) ಹತ್ಯೆಯಾದ ಕಾವಲುಗಾರ. ತೊಪ್ಪನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಒಡೆಯಲು ಕಳ್ಳರು ಮುಂದಾಗಿದ್ದಾರೆ. ಈ ವೇಳೆ ತಡೆಯಲು ಬಂದ ದೇವಸ್ಥಾನದಲ್ಲಿ ತಮಟೆ ಬಡಿಯೋ ಕೆಲಸ ಮಾಡುತ್ತಿದ್ದ ಬಸವಯ್ಯನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ತಲೆಗೆ ತೀವ್ರ ಗಾಯವಾಗಿದ್ದರಿಂದ ಬಸವಯ್ಯ ಸಾವನ್ನಪ್ಪಿದ್ದಾನೆ.

      ಸ್ಥಳಕ್ಕೆ ಶ್ವಾನದಳ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮದ್ದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap