ರಾಯಚೂರು:
ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆಯಾಗಿದ್ದು ತಾಯಿ, ಮಗು ಆರೋಗ್ಯದಿಂದಿದ್ದಾರೆ.
ಮಹಾರಾಷ್ಟ್ರದ ಪೂನಾಕ್ಕೆ ಗುಳೆಹೋಗಿದ್ದ ತಾಲೂಕಿನ ಹಾಲಬಾವಿ ತಾಂಡಾದ ಲಕ್ಷಿತ್ರ್ಮಬಾಯಿ, ತನ್ನ ಕುಟುಂಬದವರೊಂದಿಗೆ ತವರಿಗೆ ಆಗಮಿಸಿದ್ದಾರೆ.
ರೋಡಲಬಂಡಾದ ಸರಕಾರಿ ಕ್ವಾರಂಟೈನ್ ಕೇಂದ್ರದಲ್ಲಿ ಅವರನ್ನು ಇರಿಸಲಾಗಿತ್ತು. ಅವರಿಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುವ ಸಿದ್ಧತೆ ನಡೆಸಲಾಗಿತ್ತು.
ಈ ಸಮಯದಲ್ಲಿ ಅವರು, ಪತ್ನಿ ಹಾಗೂ ಅತ್ತೆಯೊಂದಿಗೆ ಅಲ್ಲಿಂದ ಎಲ್ಲರ ಕಣ್ತಪ್ಪಿಸಿ ಸ್ವ ಗ್ರಾಮಕ್ಕೆ ಪರಾರಿಯಾಗಿ ಅಧಿಕಾರಿಗಳು ತಬ್ಬಿಬ್ಬು ಆಗುವಂತೆ ಮಾಡಿದ್ದರು.
ಈಗ ಅವರ ಸ್ವಗ್ರಾಮ ಲಿಂಗಸುಗೂರಿನ ಹಾಲುಬಾವಿ ತಾಂಡ ಬಳಿ ಸಂಬಂಧಿಕರ ಮನೆಯಲ್ಲಿ ಹೆರಿಗೆಯಾಗಿದೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಬಾಣಂತಿ, ಪತಿ, ಇಬ್ಬರು ಮಕ್ಕಳನ್ನ ಐಸೋಲೇಷನ್ ವಾರ್ಡಿನಲ್ಲಿಡಲಾಗಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/Pregnant-lady-quarantine.gif)