ಸಿಎಂ ಭೇಟಿಯಾಗುವ ಸಾರ್ವಜನಿಕರಿಗೆ ಕೋವಿಡ್​ ಪರೀಕ್ಷೆ ಕಡ್ಡಾಯ!!

ಬೆಂಗಳೂರು :

      ಮುಖ್ಯಮಂತ್ರಿಯನ್ನು ಭೇಟಿಯ ಅಗಲೂ ಬರುವ ಸಾರ್ವಜನಿಕರಿಗೆ ಇನ್ಮುಂದೆ ಕೋವಿಡ್​-19 ಪರೀಕ್ಷೆ ಕಡ್ಡಾಯವಾಗಿದೆ.

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಲು ರಾಜ್ಯದ ನಾನಾ ಭಾಗಗಳಿಂದ ಸಾರ್ವಜನಿಕರು ಆಗಮಿಸ್ತಾರೆ. ತಮ್ಮ ಕಷ್ಟಗಳನ್ನ ಸಿಎಂ ಮುಂದಿಟ್ಟು, ಪರಿಹಾರಕ್ಕಾಗಿ ಮೊರೆಯಿಡ್ತಾರೆ.

    ಇದರಲ್ಲಿ ಯಾರಿಗೆ ಸೋಂಕಿದೆ ಇಲ್ಲವೋ ಎಂಬುದು ತಿಳಿದಿರುವುದಿಲ್ಲ. ಈ ಹಿನ್ನಲೆ ಗೃಹ ಕಚೇರಿಗೆ ಆಗಮಿಸುವವರಿಗೆ ಅಂಟಿಜನ್​ ಪರೀಕ್ಷೆ ಕಡ್ಡಾಯವಾಗಿ ಒಳಗಾಗಬೇಕು. ಪರೀಕ್ಷೆ ಮಾಡದೇ ಯಾರು ಕೂಡ ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ. ಅದರಲ್ಲಿಯೂ ವರದಿ ನೆಗೆಟಿವ್​ ಬಂದವರಿಗೆ ಮಾತ್ರ ಸಿಎಂ ಗೃಹ ಕಚೇರಿ ಕೃಷ್ಣಗೆ ಪ್ರವೇಶ ಸಾಧ್ಯ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

     ಕಳೆದ ಆಗಸ್ಟ್​ನಲ್ಲಿ ಸಿಎಂ ಯಡಿಯೂರಪ್ಪ ಅವರು ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ರೀತಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಗೃಹ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap