ದೆಹಲಿಯಿಂದ ಬೆಂಗಳೂರಿಗೆ 5 ವರ್ಷದ ಬಾಲಕನ ಒಂಟಿ ಪ್ರಯಾಣ!!

ಬೆಂಗಳೂರು:

     2 ತಿಂಗಳಿನಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಐದು ವರ್ಷದ ಪುಟಾಣಿಯೊಬ್ಬ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಘಟನೆ  ನಡೆದಿದೆ.

      ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರೈಲು ಹಾಗೂ ವಿಮಾನ ಹಾರಾಟ ಬಂದ್ ಆಗಿದ್ದ ಕಾರಣ ಜನರು ಇದ್ದಲ್ಲಿಯೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.  

      ತಂದೆ-ತಾಯಿ ಜೊತೆ ದೆಹಲಿಯ ಅಜ್ಜನ ಮನೆಗೆ ಹೋಗಿದ್ದ ಐದು ವರ್ಷದ ಬಾಲಕ ವಿವಾಂತ್ ಶರ್ಮಾ ಲಾಕ್ ಡೌನ್ ಕಾರಣ ವಾಪಸ್ ಬರಲು ಆಗಿರಲಿಲ್ಲ. ಲಾಕ್ ಡೌನ್ ಗೂ ಮೊದಲೇ ತಂದೆ-ತಾಯಿ ಬೆಂಗಳೂರಿಗೆ ವಾಪಸ್ ಆಗಿದ್ದರು. 2 ತಿಂಗಳಿನಿಂದ ತನ್ನ ಅಪ್ಪ-ಅಮ್ಮನನ್ನು ಯಾವಾಗ ಕಾಣುವೆನೋ ಎಂಬ ತವಕದಲ್ಲಿದ್ದ. ಇದೀಗ ಲಾಕ್​ಡೌನ್​ ಸಡಿಲಿಕೆಯಾಗಿ ವಿಮಾನ ಹಾರಾಟ ಆರಂಭಿಸುತ್ತಿದ್ದಂತೆಯೇ ವಿಮಾನದ ಮೂಲಕ ಒಂಟಿ ಪ್ರಯಾಣ ಮಾಡುವ ಮೂಲಕ ಇಂದು ತಾಯಿ ಮಡಿಲು ಸೇರಿದ್ದಾನೆ.

      ಮಗನ ಬರುವಿಕೆಗಾಗಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತಿದ್ದ ಆತನ ತಾಯಿ ಮಂಜೀತ್ ಶರ್ಮಾ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap