ತಿಪಟೂರು :
ಪ್ರಕೃತಿಯ ಮಡಿಲಲ್ಲಿ ಬಂಡೆಯನ್ನೇದೇವರೆಂದು ನಂಬಿ ತಮ್ಮ ದನಕರುಗಳಿಗೆ ಆಶ್ರಯತಾಣವಾಗಿದ್ದ ಬಾದೆಗುಡ್ಡದಲ್ಲಿನಕಲ್ಲುಗಣಿಗಾರಿಕೆಯಿಂದತಡರಾತ್ರಿಯಾದರೂ ನಿದ್ದೆಇಲ್ಲದೇಜೀವಭಯದಿಂದ ಬದುಕುವ ಸ್ಥಿತಿಗೆ ತಿಮ್ಮರಾಯನಹಳ್ಳಿ ಜನತೆ ತಲುಪಿದ್ದಾರೆ.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಮಣಕಿಕೆರೆಗ್ರಾಮಪಂಚಾಯಿತೆಗೆ ಸೇರಿದ ಸರ್ಕಾರಿ ಸರ್ವೇನಂಬರ್ 15ರಲ್ಲಿ ಖಾತೆ ಸಂಖ್ಯೆ ಗೋಮಾಳ ಲ್ಯಾಂಡ್ ಬ್ಯಾಂಕಿಗಾಗಿಅರಣ್ಯ ಇಲಾಖೆಗೆ ಸೇರಿದ226.34 ಎಕರೆ ಹಾಗೂ ಖಾತೆ ಸಂಖ್ಯೆ 224ರ 2 ಎಕರೆಜಮೀನು ಸರ್ಕಾರಿ ಸನ್ಮಾಶಾನವಾಗಿದೆ. ಈ ಜಮೀನಿನಲ್ಲಿ ಭಾರತಮಾಲ ಪರಿಯೋಜನೆರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 4 ಎಕರೆಜಮೀನನಿಲ್ಲಿ ಕಲ್ಲುಗಣಿಗಾರಿಕೆಗೆಅನುಮತಿ ನೀಡಲಾಗಿದೆ.ಸರ್ಕಾರದ ನಿಯಮಂದಂತೆ ಗೋಮಾಳ ಹಾಗೂ ಅರಣ್ಯಕ್ಕೆ ಮೀಸಲಿರಿಸಿದ ಪ್ರದೇಶದಲ್ಲಿಗಣಿಗಾರಿಕೆ ಮಾಡುವುದನ್ನು ನಿಷೇದಿಸಿದ್ದರೂ ಇವರಿಗೆಕಲ್ಲುಗಣಿಗಾರಿಕೆ ಮಾಡಲುಅನುಮತಿ ನೀಡಿರುವುದುಎಷ್ಟರಮಟ್ಟಿಗೆ ಸರಿಎಂದು ಸುತ್ತಮುತ್ತಲಿನ ಸಾರ್ವಜನಿಕರುಆಕ್ಷೇಪಿಸುತ್ತಿದ್ದಾರೆ.
ರಾಕ್ಷಸಿ ಗುಡ್ಡದಲ್ಲಿ ಪೂಜೆ :

ಬಹಳ ಹಿಂದೆ ಇಲ್ಲೊಬ್ಬ ಬೃಹದಾಕಾರದರಾಕ್ಷಸನಿದ್ದನು ಇವನು ಅಡುಗೆ ಮಾಡಿಕೊಳ್ಳಲು ಇದೇಗುಡ್ಡದಲ್ಲಿನಕಲ್ಲೊಂದನ್ನುಕಾರಅರೆಯುವಕಲ್ಲನ್ನಾಗಿ ಬಳಸುತ್ತಿದ್ದು ನೀರಿಗಾಗಿ ಹಾಲ್ಕುರಿಕೆಕೆರಿಂದತನ್ನಕೈನಲ್ಲೇ ನೀರನ್ನುತೆಗೆದುಕೊಂಡುಕಾರಅರೆಯಲುಉಪಯೋಗಿಸುತ್ತಿದ್ದನುಎಂದರೆ ಅವನ ದೇಹ ಎಷ್ಟು ಬೃಹದಾಕಾರವಾಗಿತ್ತೆಂದು ತಿಳಿಯಬಹುದು.
ನಾವು ಏನಾದರುತಪ್ಪುಮಾಡಿದರೆಕಾರಅರೆಯುವರಾಕ್ಷಸಕಲ್ಲು ನಮ್ಮ ಮೇಲೆ ಬೀಳುತ್ತದೆ ಎಂಬುದು ಸುತ್ತಮುತ್ತಲಿನ ಜನರ ಪ್ರತೀತಿಯಾಗಿದ್ದು ಈ ರಾಕ್ಷಸಿ ಕಲ್ಲನ್ನು ಪೂಜಿಸಿ ಅದಕ್ಕೆ ಮೊಸರನ್ನವನ್ನು ನೈವೇದ್ಯಮಾಡುವ ಪ್ರತೀತಿ ಈಗಲು ಸಹ ನಡೆಯುತ್ತಿದೆ.

ಇನ್ನು ಈ ರಾಕ್ಷಸಿ ಕಲ್ಲಿಗೆ ಸರಿರಾತ್ರಿಯಲ್ಲಿಯಾರುಯಾರೋ ಬಂದು ಪೂಜೆಮಾಡಿ ನೇವೇದ್ಯವನ್ನುಇಟ್ಟು ಹಣವನ್ನು ಸಹ ಹಾಕಿಹೋಗುತ್ತಾರೆ. ಆದರೆ ಇಲ್ಲಿಇಡುವ ನೈವೇದ್ಯವನ್ನು ಕಾಗೆಗಳು, ನಾಯಿಗಳುಸಹ ತಿನ್ನುವುದಿಲ್ಲ ಎನ್ನುತ್ತಾರೆ.ಉತ್ತಮ ಮಳೆಯಾಗಿ, ಸಮೃದ್ದವಾದ ಬೆಳೆಬೆಳದು ನಮ್ಮನ್ನೆಲ್ಲ ಹರಸುವಂತೆ ತಿಮ್ಮರಾಯನಹಳ್ಳಿ ಗ್ರಾಮಸ್ಥರು ವರ್ಷಕ್ಕೊಂದು ಬಾರಿ ನಮ್ಮನ್ನುಕಾಪಾಡುವಂತೆ ರಾಕ್ಷಸಿ ಕಲ್ಲನ್ನು ಪೂಜಿಸಿ ಪ್ರಾರ್ಥಿಸುತ್ತಾರೆ.
ಪರಿಸರ ನಾಶದಿಂದಕಾಣೆಯಾದ ಪ್ರಾಣಿ ಸಂಪತ್ತು:
ಬಾದೆಗುಡ್ಡ @ ರಾಕ್ಷಸಿಗುಡ್ಡದಲ್ಲಿ ಕರಡಿ, ಚಿರತೆ, ನರಿ, ತೋಳ, ನವಿಲು ಮುಂತಾದ ಪ್ರಾಣಿಗಳಿಗೆ ಆಶ್ರಯತಾಣವಾಗಿದ್ದುಇಲ್ಲಿನಕಟ್ಟೆಯೊಂದರಲ್ಲಿ ವರ್ಷಪೂರ್ತಿ ನೀರಿದ್ದುಇಲ್ಲಿನ ಪ್ರಾಣಿಪಕ್ಷಿಗಳಿಗೆ ನೀರುಣಿಸುತ್ತಿತ್ತು. ಆದರೆಕಲ್ಲುಗಣಿಗಾರಿಕೆಆರಂಭವಾದಾಗಿನಿಂದಅಂತರ್ಜಲ ಕುಸಿಯುವುದರೊಂದಿಗೆ ಇಲ್ಲಿನಕಟ್ಟೆಯ ನೀರುಸಹಇಂಗುತ್ತಿರುವುದರಿಂದಇಲ್ಲಿನ ಪ್ರಕೃತಿ ಹಾಳಾಗುವುದರೊಂದಿಗೆ ಇಲ್ಲಿದ್ದ ಪ್ರಾಣಿ-ಪಕ್ಷಿಗಳು ದಿಕ್ಕಾಪಾಲಾಗಿ ಹೋಗಿವೆ.
ಬೃಹತ್ ಸ್ಪೋಟಕ್ಕೆಚದುರುತ್ತಿವೆ ಮನೆಗಳು :
ಬಂಡೆಯನ್ನು ಸ್ಪೋಟಿಸಲು ಬಳಸುವ ದೊಡ್ಡ ಪ್ರಮಾಣದ ಸ್ಪೋಟಕಗಳಿಂದ ಮನೆಗಳು ಬಿರುಕು ಬಿಡುತ್ತಿವೆ ಹಾಗೂ ಸಿಡಿಮದ್ದಿನ ರಭಸಕ್ಕೆ ಮನೆಗಳಮೇಲೆ ಕಲ್ಲುಗಳು ಬಂದು ಬೀಳುತ್ತಿದ್ದಯ ಇವು ಯಾರತಲೆಯ ಮೇಲಾದರು ಬಿದ್ದರೆ ಸಾವು ಸಂಭವಿಸುವುದುತಪ್ಪುವುದಿಲ್ಲ. ಹಾಗೂ ಇಲ್ಲಿನ ಸಿಡಿಮದ್ದಿನ ಸ್ಪೋಟದಿಂದ ಬರುವದೂಮಕ್ಕೆಜನರು ಉಸಿರಾಡಲು ಸಾಧ್ಯವಾಗದಷ್ಟುದಟ್ಟಹೊಗೆಆವರಿಸುತ್ತದೆ. ಇದರಿಂದ ಸ್ಥಳಿಯರಿಗೆ ಉಬ್ಬಸ, ಕೆಮ್ಮು, ಕಣ್ಣಿನಉರಿ ಮುಂತಾದ ಆರೋಗ್ಯಸಮಸ್ಯೆಗಳು ಉದ್ಭವಿಸುತ್ತಿವೆ.
ಇಷ್ಟೆಲ್ಲಾ ಸಮಸ್ಯೆಗಳ ಬದುಕುತ್ತಿರುವಜನರಲ್ಲಿ ಹಿಂದುಳಿದ ವರ್ಗದವರೇ ಹೆಚ್ಚಾಗಿದ್ದು ಭೂಮಿಯನ್ನೇ ನಂಬಿ ಬದುಕುವಜನರಿದ್ದು ಹೈನುಗಾರಿಕೆ ನಡೆಸುತ್ತಿದ್ದುಕೊರೊನಾದ ನಡುವೆಯುಡೈರಿಗೆ ದಿನನಿತ್ಯ ನಾಲ್ಕೈದು ಕ್ಯಾನ್ಗಳಷ್ಷು ಹಾಲನ್ನು ಹಾಕುತ್ತಿದ್ದಾರೆ.ಆದರೆಗಣಿಯ ಹಾಗೂ ಕ್ರಷರ್ನ ಶಬ್ದಕ್ಕೆ ಹಸುಗಳು ಹೆಸದುತ್ತಿದ್ದ ಬೆಚ್ಚಿಬೀಳುತ್ತಿದ್ದು ಹಸುಗಳಿಗೇ ಏನಾದರುಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಮ್ಮಜೀವನದ ಪಾಡೇನುಎನ್ನುವಂತ ಮಸ್ಯೆಯ ನಡುವೆಗ್ರಾಮಸ್ಥರು ವಾಸಿಸುವಂತಾಗಿದೆ.
ರಾಕ್ಷಸಿ ಬಂಡೆಯನ್ನುದೇವರೆಂದು ತಿಳಿದು ನಮ್ಮ ಕಷ್ಟಗಳನ್ನೆಲ್ಲಾ ತಿರಿಸುತ್ತಿದೆಎಂದು ನಂಬಿದ್ದೆವು. ಆದರೆಇಂದುಕಲ್ಲುಗಣಿಗಾರಿಕೆಇಂದ ಈ ರಾಕ್ಷಸಿ ಗುಡ್ಡಕ್ಕೆ ಬೆಂಕಿ ಇಡುತ್ತಿದ್ದಾರೆಇದರಿಂದ ನಮಗೆ ಆರೋಗ್ಯ ಸಮಸ್ಯೆಯಜೊತೆಗೆತೀರ್ವವಾದಅಂತರ್ಜಲ ಕುಸಿತದಿಂದ ನಮ್ಮನ್ನುಕಾಪಾಡುವವರುಯಾರುಎಂಬುದು ತಿಳಿಯದಾಗಿದೆ
-ಜಗದೀಶ್ ರಾಷ್ಟ್ರೀಯಕ್ರೀಡಾಪಟು
ಕಲ್ಲುಗಣಿಗಾರಿಕೆಯ ಸ್ಪೋಟಕ್ಕೆ ಹಸುಗಳು ಬೆದರುತ್ತಿದು ದಿನೇದಿನೇ ಹಾಲಿನ ಪ್ರಮಾಣವುಕಡಿಮೆಯಾಗುತ್ತಿದ್ದುಕಲ್ಲುಗಣಿಗಾರಿಕೆಇಂದ ನಮ್ಮಜೀವನವೇ ನಲುಗಿಹೋಗಿದ್ದು ಮುಂದಿನ ದಿನಗಳಲ್ಲಿ ದೇರೀತಿ ಮುಂದುವರೆದರೆ ನಾವೆಲ್ಲಊರನ್ನು ಬಿಡಬೇಕಾದ ಪರಿಸ್ಥಿತಿ ಬರುತ್ತದೆ.
ರಂಗಮ್ಮ
ರಂಗನಾಥ್ ಪಾರ್ಥಸಾರಥಿ
