ತಕ್ಷಣವೇ ‘ಮೇಕೆದಾಟು ಪಾದಯಾತ್ರೆ’ ನಿಲ್ಲಿಸಿ – ‘ಕಾಂಗ್ರೆಸ್ ಹೈಕಮಾಂಡ್’ ಸೂಚನೆ

ನವದೆಹಲಿ:

ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು . ರಾಜ್ಯ ಸರ್ಕಾರ ಮೇಕೆದಾಟು ಪಾದಯಾತ್ರೆಯನ್ನು ನಿರ್ಬಂಧಿಸಿ ಆದೇಶಿಸಿದೆ.

        ಹೈಕೋರ್ಟ್ ಕೂಡ ಕೊರೋನಾ  ಹೆಚ್ಚಳದ ನಡುವೆಯೂ ಪಾದಯಾತ್ರೆ ನಡೆಸುತ್ತಿರೋದಕ್ಕೆ ಗರಂ ಆಗಿದೆ. ಈ ಜೊತೆ ಜೊತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವಂತ ಅನೇಕ ಕಾಂಗ್ರೆಸ್ ನಾಯಕರಿಗೆ ಕೋವಿಡ್ 19  ದೃಢಪಟ್ಟಿದೆ.

     ಈ ಎಲ್ಲಾ ಕಾರಣದಿಂದಾಗಿ ಕಾಂಗ್ರೆಸ್ ನಾಯಕರಿಗೆ ಈ ತಕ್ಷಣವೇ ಪಕ್ಷಕ್ಕೆ ಮುಜುಗರವಾಗದಂತೆ ಕಾಂಗ್ರೆಸ್ ಹೈಕಮಾಂಡ್ ಪಾದಯಾತ್ರೆ ನಿಲ್ಲಿಸುವಂತೆ ತಿಳಿಸಿದೆ ಎನ್ನಲಾಗಿದೆ.

ಈ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರ ಮೂಲಕ ಸೂಚನೆ ನೀಡಿರುವಂತ ಕಾಂಗ್ರೆಸ್ ಹೈಕಮಾಂಡ್, ಕೊರೋನಾ ಹೆಚ್ಚಳ ಹಿನ್ನಲೆ, ರಾಜ್ಯ ಸರ್ಕಾರ ನಿಷೇಧ, ಹೈಕೋರ್ಟ್ ಗರಂ ಹಾಗೂ ಕಾಂಗ್ರೆಸ್ ಮುಖಂಡರು ಪಾಸಿಟಿವ್ ಆಗುತ್ತಿರೋ ನಡುವೆಯೂ ಮೇಕೆದಾಟು ಪಾದಯಾತ್ರೆ ನಡೆಸುತ್ತಿರೋದು ಸರಿಯಲ್ಲ.

ಇದರಿಂದ ಪಕ್ಷಕ್ಕೆ ಮುಜುಗರ ಕೂಡ ಉಂಟಾಗಲಿದೆ. ಕೂಡಲೇ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ, ಇಂದು ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಮೊಟಕುಗೊಳಿಸುತ್ತಾರೋ ಅಥವಾ ಯಾವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನುವ ಬಗ್ಗೆ ಕೆಲವೇ ಕ್ಷಣಗಳಲ್ಲಿ ಮಾಹಿತಿ ತಿಳಿಯಲಿದೆ.

ಈ ನಡುವೆ ರಾಮನಗರವನ್ನು ತಲುಪಿರುವಂತ ಕಾಂಗ್ರೆಸ್ ಪಾದಯಾತ್ರೆಯ ಕಾಂಗ್ರೆಸ್ ಕಚೇರಿಗೆ ರಾಮನಗರ ಎಸ್ಪಿ ಗಿರೀಶ್ ಭೇಟಿ ನೀಡಿ, ಕಾಂಗ್ರೆಸ್ ಮುಖಂಡರನ್ನು ಪಾದಯಾತ್ರೆ ಕೈಬಿಡುವಂತೆ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap