ಕೊರಟಗೆರೆ : ಹೆಂಡತಿಯ ನೆನಪಿನಲ್ಲಿ ನೇಣು ಬಿಗಿದುಕೊಂಡು ಅರ್ಚಕರ ಆತ್ಮಹತ್ಯೆ

ಕೊರಟಗೆರೆ

   ಚೌಡೇಶ್ವರಿ ದೇವಸ್ಥಾನದ ಅರ್ಚಕರು ಹೆಂಡತಿ ಸಾವಿಗೀಡಾಗಿ 8 ವರ್ಷ ಕಳೆದರೂ ಅದೇ ಗುಂಗ್ಗಿನಲ್ಲಿ ಮಾನಸಿಕವಾಗಿ ಮನನೊಂದು ಹೆಂಡತಿ ಇಲ್ಲದ ಜೀವನ ನನಗೇಕೆ ಎನ್ನುವ ರೀತಿಯಲ್ಲಿ ಮನನೊಂದು ಹೆಂಡತಿಯ ನೆನಪಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಪ್ರಸಂಗವೊಂದು ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

   ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗನಹಳ್ಳಿ ಗ್ರಾಮದ ವಾಸಿ ತಿಮ್ಮಪ್ಪನ ಮಗ ವರದರಾಜು (53 ವರ್ಷ) ಸಾವಿಗೀಡಾದ ದುರ್ದೈವಿಯಾಗಿದ್ದಾನೆ.

   ಮೃತ ವರದರಾಜು ವಿನ ಮಡದಿ ಕಳೆದ 8 ವರ್ಷಗಳ ಹಿಂದೆ ಸಾವಿಗಿಡಾಗಿದ್ದು, ಮಡದಿ ಸಾವಿನಿಂದ ಕುಗ್ಗಿ ಹೋಗಿದ್ದ ವರದರಾಜು ತಂದೆ, ತಾಯಿ, ಸ್ನೇಹಿತರು ಸೇರಿದಂತೆ ಸಂಬಂಧಿಕರು ಹಲವು ಬಾರಿ ಮದುವೆಯಾಗಲು ಓಲೈಕೆ ಮಾಡಿದರಾದರೂ ಒಪ್ಪದಾ ವರದರಾಜು ಹೆಂಡತಿಯ ನೆನಪಿನಲ್ಲಿಯೇ ಕಾಲ ಕಳೆಯುತ್ತಿದ್ದು ಇತ್ತೀಚಿಗೆ ಬಹಳಷ್ಟು ಹೆಂಡತಿಯ ಗುಂಗಿನಲ್ಲಿಯೇ ಮಂಕಾಗಿದ್ದ ವರದರಾಜು ಅವರಿಗೆ ಹಲವು ಬಾರಿ ಬುದ್ಧಿವಾದ ಹೇಳಿದರೂ ಪ್ರಯೋಜನವಾಗದೆ ಚೌಡೇಶ್ವರಿ ದೇವಸ್ಥಾನದ ಹಿಂಭಾಗದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ಅಭಿಷೇಕ್ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿ ಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Recent Articles

spot_img

Related Stories

Share via
Copy link