ಸುಮಲತಾ ಅಂಬರೀಷ್ ಗೆ ‘ಕಹಳೆ’ ಚಿಹ್ನೆ!!

ಮಂಡ್ಯ:

     ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಚುನಾವಣಾ ಆಯೋಗ ‘ಕಹಳೆ ಊದುತ್ತಿರುವ ವ್ಯಕ್ತಿಯ’ ಗುರುತಿನ ಚಿಹ್ನೆಯನ್ನ ನೀಡಿದೆ.

      ಇದಕ್ಕೂ ಮೊದಲು, ಕೈಗಾಡಿ ಚಿಹ್ನೆ ನೀಡಿದ್ದ ಚುನಾವಣಾ ಆಯೋಗ, ಕೊನೆಗೆ ಕಹಳೆ ಊದುತ್ತಿರುವ ವ್ಯಕ್ತಿಯ ಚಿತ್ರವನ್ನ ಅಂತಿಮಗೊಳಿಸಿದೆ.

     ಚುನಾವಣಾ ಕಣದಲ್ಲಿದ್ದವರಿಗೆ ಆಯೋಗ ಚಿಹ್ನೆಗಳನ್ನು ನೀಡಿದ್ದು, ಸುಮಲತಾ ಅಂಬರೀಶ್ ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ, ಕಬ್ಬಿನ ಗದ್ದೆ ಮುಂದೆ ರೈತ ನಿಂತಿರುವ ಚಿಹ್ನೆಗಳನ್ನು ಆಯ್ಕೆ ಮಾಡಿದ್ದರು.

      ಆದರೆ, ಲಕ್ಕಿ ಡ್ರಾನಲ್ಲಿ ಮೂರು ಚಿಹ್ನೆಗಳು ಬೇರೆಯವರ ಪಾಲಾಗಿ, ಇವರಿಗೆ ತಳ್ಳುವ ಗಾಡಿ ಚಿಹ್ನೆ ಸಿಕ್ಕಿತ್ತು. ಕೊನೆಗೆ ಕಹಳೆ ಊದುತ್ತಿರುವ ವ್ಯಕ್ತಿಯ ಚಿತ್ರವನ್ನ ಅಂತಿಮಗೊಳಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link