ಲಕ್ಷುರಿ ವಿಲ್ಲಾಗಳನ್ನು ನಿರ್ಮಿಸುವಲ್ಲಿ ಸೂರ್ಯ ಡೆವಲಪರ್ಸ್‌ ಪಾತ್ರ ದೊಡ್ಡದು

ಬೆಂಗಳೂರು:

   ನೆಮ್ಮದಿಯ ಬದುಕನ್ನ ಅರಸುವವರಿಗೆಂದೆ ನಗರದ ಯಲಹಂಕದ ರಾಜಾನುಕುಂಟೆ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ಆಕರ್ಷಕವಾಗಿ ನಿರ್ಮಾಣವಾಗುತ್ತಿರುವ ಸೂರ್ಯ- ವೆಲೆನ್ಸಿಯಾ ವಿಲ್ಲಾಗಳನ್ನು ಯಲಹಂಕಾ ಶಾಸಕರಾದ ಎಸ್‌ ಆರ್‌ ವಿಶ್ವನಾಥ್‌ ಅವರು ಉದ್ಘಾಟಿಸಿದರು.

   ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ (ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ) ರವರು ದಿವ್ಯ ಸಾನಿಧ್ಯವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಡಾ. ಶಿವರಾಜ್ ಪಾಟೀಲ್‌ ಮತ್ತು ನಟ ಡಾಲಿ ಧನಂಜಯ್‌, ಶಾಸಕರಾದ ಎ ಸಿ ಶ್ರೀನಿವಾಸ್ ಹಾಗೂ ಕೃಷಿ ಮಂತ್ರಿ ಚಲುವರಾಯಸ್ವಾಮಿ ರವರ ಪುತ್ರ ಸಚಿನ್ , ಚನ್ನಗಿರಿ ಶಾಸಕರಾದ ಶಿವಗಂಗಾ ಬಸವರಾಜ್, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್, KPSC chairman ಶಿವಶಂಕರಪ್ಪ S ಸಾಹುಕಾರ್,ಹಿರಿಯ ಕನ್ನಡ ನಟಿ ಗೀತಾ ಹಾಗು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

   ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಉತ್ತಮ ಕಟ್ಟಡ ನಿರ್ಮಾಣದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಸೂರ್ಯ ಡೆವಲಪರ್ಸ್‌ ನ ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವನಾಥ ಬಾತಿ ಯವರನ್ನು ಅಭಿನಂದಿಸಿದರು.‌ಈ ಕುರಿತು ಸೂರ್ಯ ಡೆವಲಪರ್ಸ್‌ ನ ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವನಾಥ್ ಬಾತಿ ರವರು ಮಾತನಾಡಿ, ಶಾಶ್ವತವಾದ ಗುಣಮಟ್ಟವುಳ್ಳ ಕಟ್ಟಣ ನಿರ್ಮಾಣದಲ್ಲಿ ನಮ್ಮ ಸಂಸ್ಥೆ ತೊಡಗಿಕೊಂಡಿದೆ. ಯಾವುದೇ ರೀತಿಯಲ್ಲೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಗ್ರಾಹಕರ ಅಗತ್ಯ ಅರಿತುಕೊಂಡು ವಿಶ್ವಾಸ ಗಳಿಸುವುದು ನಮ್ಮ ಅತ್ಯಧಿಕ ಆಯ್ಕೆ ಹಾಗೂ ಗುರಿಯಾಗಿದೆ ಎಂದರು. 

   ನಗರಕ್ಕೆ ಮೆಡಿಟರೇನಿಯನ್ ಜೀವನದ ಸೊಬಗನ್ನು ತರುವ ಸೂರ್ಯ ವೆಲೆನ್ಸಿಯಾ ರಾಜನುಕುಂಟೆ-ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಯಲಹಂಕ ಬಳಿ ನಿರ್ಮಿಸುತ್ತಿರುವ ಐಷಾರಾಮಿ ಸ್ಪ್ಯಾನಿಷ್ ವಿಲ್ಲಾಗಳನ್ನು ಪ್ರಾರಂಭಿಸಿದೆ. ಯೂರೋಪಿಯನ್ ಶೈಲಿಯ ಸಾಂಪ್ರದಾಯಿಕ ಕಲೆಯು ಮತ್ತು ಆದುನಿಕ ಸೌಕರ್ಯಗಳೊಂದಿಗೆ ಸಂಯೋಜಿಸುವ ಮೂಲಕ ಎಕ್ಸ್‌ಕ್ಲೂಸಿವ್‌ ವಿಲ್ಲಾಗಳು ನಿರ್ಮಾಣವಾಗುತ್ತಿದೆ

   ಈ ಯೋಜನೆಯು 9 ಎಕರೆಯಲ್ಲಿ ವಿಸ್ತಾರವಾಗಿ 122 ವಿಲ್ಲಾಗಳನ್ನು ನಿರ್ಮಾಣ ಮಾಡಲು ಯೋಜಿತವಾಗಿದೆ. ಪ್ರತಿ ವಿಲ್ಲಾವನ್ನು triple-height ceiling, private backyard, walk-in wardrobes and balconies in every room ಗಳೊಂದಿಗೆ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. 20,000 ಚದರ ಅಡಿ ವಿಸ್ತೀರ್ಣವುಳ್ಳ ಕ್ಲಬ್‌ಹೌಸ್ ಹಲವಾರು ಜೀವನಶೈಲಿ ಸೌಲಭ್ಯಗಳನ್ನು ಹೊಂದಿದೆ. ಗಾಲ್ಫ್ ಕೋರ್ಸ್, ಈಜುಕೊಳ, ಹೊರಾಂಗಣ ಜಿಮ್, ಯುರೋಪಿಯನ್ ಶೈಲಿಯ ಭೂದೃಶ್ಯ ಉದ್ಯಾನಗಳು, ಕಾರಂಜಿಗಳು ಮತ್ತು ಸಂಕೀರ್ಣವಾದ ಸ್ಪ್ಯಾನಿಷ್ ಶಿಲ್ಪಗಳನ್ನು ಹೊಂದಿದ್ದು, ಇದು ವಿಶ್ರಾಂತಿ ಮತ್ತು ಮನರಂಜನೆಗೆ ಸೂಕ್ತ ಸ್ಥಳವಾಗಿದೆ.

Recent Articles

spot_img

Related Stories

Share via
Copy link