ಮಧುಗಿರಿ: ಆಕಸ್ಮಿಕ ಎದ್ದ ಸುಂಟರಗಾಳಿ: ನಾಲ್ವರಿಗೆ ಗಾಯ

ಮಧುಗಿರಿ :

    ಆಕಸ್ಮಿಕವಾಗಿ ಬೀಸಿದ ಬಿರುಗಾಳಿಯಿಂದ ಮಹಿಳೆಯು ಸೇರಿದಂತೆ ನಾಲ್ವರಿಗೆ ಘಾಯವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಶನಿವಾರ ಮಧ್ಯಾಹ್ನ ಎರಡರ ಸಮಯದಲ್ಲಿ ನಡೆದಿದೆ.

    ಪಟ್ಟಣದ ಎಪಿಎಂಸಿ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ವ್ಯಾಪಿಸಿ ಮಧುಗಿರಿ-ಗೌರಿಬಿದನೂರು ರಸ್ತೆಯ ಆದ್ವೈತಾ ಶಾಲೆಯ ಮುಂಭಾಗದಲ್ಲಿದ್ದ ಕಬ್ಬಿಣದ ಪೆಟ್ಟಿಗೆ ಅಂಗಡಿಯೊಂದು ಬೀಸಿದ ಬಿರುಗಾಳಿ ಗಾಳಿಯಲ್ಲಿ ತೇಲಿಕೊಂಡು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬಂದು ಬಿದ್ದಿದ್ದೆ.

  ಘಟನೆ ಸಂಬಂಧಿಸಿದಂತೆ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತನ್ನ ಬಲೆಗೆ ಕೆಡಿವಿ ಕೊಂಡು ಗಂಭೀರವಾಗಿ ಘಾಯಗೊಳಿಸಿದೆ. 

    ತಾಲೂಕು ಕಚೇರಿಯ ಕಂಪ್ಯೂಟರ್ ಆಪರೇಟರ್ ಪ್ರಭಾಕರ (32) ಹಾಗೂ ಆತನ ಸ್ನೇಹಿತನು ಸೇರಿದಂತೆ ಮುಸ್ಲಿಂ ಸಮುದಾಯದ ದಂಪತಿಗಳನ್ನು ಘಾಯಗೊಳಿಸಿದ್ದು ಪಕ್ಕದಲ್ಲಿಯೇ ಇದ್ದ ಈಚಲು ಮರ ಮುರಿದ ಬಿದ್ದ ಕಾರಣ ವಾಹನಗಳ ರಸ್ತೆ ಸಂಚಾರವು ಅಸ್ತವ್ಯಸ್ತವಾಗಿತ್ತು. ಈ ಸುಂಟರ ಗಾಳಿಯನ್ನು ಕಂಡ ಪ್ರತ್ಯಕ್ಷ ದರ್ಶಿಗಳು ಬೆಚ್ಚಿಬಿದ್ದು ಭೂ ಕಂಪನವಾದಂತೆ ಆಗಿದೆ ಎಂದು ತಿಳಿಸಿದರು.

Recent Articles

spot_img

Related Stories

Share via
Copy link