ರಸ್ತೆಯಲ್ಲಿ ಹುಣಸೇಹಣ್ಣಿನ ವಿಂಗಡಣೆ ; ಓಡಾಟಕ್ಕೆ ತೊಂದರೆ

 ಹೊನ್ನವಳ್ಳಿ : 

      ಹೊನ್ನವಳ್ಳಿಯ ಪೊಲೀಸ್ ವಸತಿಗೃಹದ ಹಿಂದಿನ ರಸ್ತೆಯಲ್ಲಿ ದಿನನಿತ್ಯ ರಸ್ತೆಗೆ ಹುಣಸೇಹಣ್ಣು ಹಾಕಿಕೊಂಡು ವಿಂಗಡನೆಮಾಡುತ್ತಿದ್ದು ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದೆ.

      ಹೊನ್ನವಳ್ಳಿ ಗ್ರಾಮದಲ್ಲಿ ಹುಣಸೇಹಣ್ಣಿನ ಸಮಯ ಪ್ರಾರಂಭವಾಯಿತು ತೆಂದರೆ ಮನೆಯ ಮುಂದಿನ ರಸ್ತೆಗೆ ಹುಣಸೇಹಣ್ಣನ್ನು ಹಾಕಿಕೊಂಡು ಬಡಿದು ತೊಗಟೆ ತೆಗೆಯುವುದು ಜಜ್ಜಿ ಬೀಜ ತೆಗೆಯುವ ಕಾಯಕದಲ್ಲಿ ತೊಡಗುತ್ತಾರೆ ರಸ್ತೆಯಲ್ಲಿ ಓಡಾಡುವವರೆಗೆ ತೊಂದರೆ ಯಾಗುತ್ತಿದ್ದು ಈ ಬಗ್ಗೆ ಪತ್ರಿಕಾ ಪ್ರತಿನಿಧಿ ನಂಜಪ್ಪ ಹಲವರು ಬಾರಿ ಮನೆಯವರಿಗೆ ಮೌಖಿಕವಾಗಿ ತಿಳಿಸಿದರೆ ಜಗಳಕ್ಕೆ ಬರುತ್ತಾರೆ. ಈ ಬಗ್ಗೆ ಈಗಾಗಲೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು ಸಹ ಯಾವುದೆ ಕ್ರಮವನ್ನು ತೆಗೆದು ಕೊಂಡಿಲ್ಲವೆಂದು ಆರೋಪಿಸುತ್ತಾರೆ. ಇವರಿಲ್ಲದೆ ಇನ್ನೊಬ್ಬರು ಇದೇ ರಸ್ತೆಗೆ ಬೇರೆಲ್ಲಿಂದಲೋ ಹುಣಸೇಹಣ್ಣನ್ನು ತಂದು ಇಲ್ಲಿಯೆ ಸ್ವಚ್ಚಗೊಳಿಸುತ್ತಾರೆ.

ಇನ್ನು ಈರೀತಿ ರಸ್ತೆಯಲ್ಲಿ ಯಾವುದೆ ಮುನ್ನಚ್ಚರಿಕೆ ಕ್ರಮಗಳಿಲ್ಲದೆ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಹುಣಸೇಹಣ್ಣನ್ನು ವಿಲೇವಾರಿ ಮಾಡುತ್ತಿದ್ದು ಇದೆ ರಸ್ತೆಯಲ್ಲಿ ನಾಯಿಗಳು ಇನ್ನಿತರೆ ಪ್ರಾಣಿಗಳು ಸಹ ಓಡಾಡುತ್ತವೆ ಹಲವಾರು ಕಲ್ಮಷಗಳು ಸೇರಿರುವ ಈ ಹುಣಸೇಹಣ್ಣನ್ನು ತಿಂದ ಜನರ ಪರಿಸ್ಥಿತಿ ಏನಾಗಬೇಕು ಈಗಲಾದರು ಗ್ರಾಮ ಪಂಚಾಯಿತಿಯ ಸಿಬ್ಬಂದಿ ಇದನ್ನು ಸರಿಪಡಿಬೇಕೆಂದು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link