ವಿಧಾನಸಭೆಯಲ್ಲಿ ‘ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯ್ತಿ’ ಪ್ರಶ್ನೆ, ‘ಸಿಎಂ ಬೊಮ್ಮಾಯಿ’ ನೋ ರಿಯಾಕ್ಷನ್

ಬೆಂಗಳೂರು:

ರಾಜ್ಯಾಧ್ಯಂತ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದೇ ರಿಲೀಸ್ ಆದಂತ ಅವರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಗೆ, ದಿ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಿದಂತೇ, ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಈ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿಯೂ ಸದಸ್ಯರು ಸರ್ಕಾರವನ್ನು ಆಗ್ರಹಿಸಿದ್ರು. ಆದ್ರೇ ಜೇಮ್ಸ್ ಚಿತ್ರದ ತೆರಿಗೆ ವಿನಾಯತಿ ವಿಚಾರದ ಪ್ರಶ್ನೆಗೆ ಯಾವುದೇ ಉತ್ತರವನ್ನು ಬಸವರಾಜ ಬೊಮ್ಮಾಯಿ  ನೀಡಿಲ್ಲ ಎಂಬುದಾಗಿ ತಿಳಿದು ಬಂದಿದೆ.

ಪುನೀತ್ ಹುಟ್ಟುಹಬ್ಬ ಸುಬ್ರಹ್ಮಣ್ಯನಗರದಲ್ಲಿ ಸಂಭ್ರಮದ ಆಚರಣೆ; ಸಿಹಿ, ಉಪಾಹಾರ ವಿತರಣೆ

ಬಿಜೆಪಿ ಪಕ್ಷದ ಸಿಟಿ ರವಿ, ಮಾಜಿ ಸಚಿವ ಎಂ.ಬಿ ಪಾಟೀಲ್ ಬಳಿಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ, ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಪುನೀತ್ ಬಗ್ಗೆ ಬೊಮ್ಮಾಯಿ ಬಹಳ ಪ್ರೀತಿ ತೋರ್ಸಿದ್ರು, ಪದ್ಮಶ್ರೀ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತೋ ಇಲ್ವೋ ಗೊತ್ತಿಲ್ಲ. ನಮ್ಮ ಕಾಡಿನವರು ಎಂದು ರಾಜಕುಮಾರ್ ನನಗೆ ಹೇಳ್ತಿದ್ರು. ಪುನೀತ್ ರಾಜ್‍ಕುಮಾರ್ ಕೂಡ ಜನಪ್ರಿಯ ವ್ಯಕ್ತಿ. ಜೇಮ್ಸ್ ಚಿತ್ರ ಎಲ್ಲ ನೋಡಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

 ಶೀಘ್ರವೇ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ – ಸಿಎಂ ಬಸವರಾಜ ಬೊಮ್ಮಾಯಿ

ನಾನು ಥಿಯೇಟರ್ ಗೆ ಹೋಗಲ್ಲ, ಹೋಗ್ಬಾರದು ಅಂತಿಲ್ಲ, ಥಿಯೇಟರ್ ಗೆ ಹೋಗುವ ಅಭ್ಯಾಸ ತಪ್ಪಿದೆ. ರಾಜಕುಮಾರ ಫಿಲಂಗೆ ಹೋಗಿದ್ದೆ ಎಂದು ಹೇಳಿದ್ದಾರೆ.

ಇತ್ತ ವಿಧಾನಸಭೆಯಲ್ಲಿ ಅನೇಕ ಸದಸ್ಯರು ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದಾಗ, ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ, ಯಾವುದೇ ಪ್ರತಿಕ್ರಿಯೆಯನ್ನು ಆ ಬಗ್ಗೆ ನೀಡಲಿಲ್ಲ ಎಂಬುದಾಗಿ ತಿಳಿದು ಬಂದಿದೆ.

 ಪುನೀತ್ ರಾಜ್​ಕುಮಾರ್ ‘ಜೇಮ್ಸ್’ ಹೇಗಿದೆ? ಇಲ್ಲಿದೆ ಮಾಹಿತಿ

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link