ಅಮೆರಿಕ:
ವಿಶ್ವಸಂಸ್ಥೆಯ ಭದ್ರತಾ ಸಮಿತಿ, ಸಾಮಾನ್ಯ ಸಭೆ ಹಾಗೂ ಮಾನವಹಕ್ಕುಗಳ ಆಯೋಗಗಳಲ್ಲಿ ರಷ್ಯಾ ವಿರುದ್ಧ ಅಮೆರಿಕ ಮತ್ತದರ ಮಿತ್ರದೇಶಗಳು ಮಂಡಿಸಿದ ಗೊತ್ತುವಳಿಗಳ ಪರವಾಗಿ ಭಾರತ ಮತ ಹಾಕದೇ ತಟಸ್ಥವಾಗಿ ಉಳಿದದ್ದು ತಪ್ಪೆನ್ನುವುದಾದರೆ ಆ ತಪ್ಪನ್ನು ಚೀನಾ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ 35 ದೇಶಗಳು ಮಾಡಿವೆ.
ರಷ್ಯಾ-ಯೂಕ್ರೇನ್ ಯುದ್ಧಕ್ಕೆ ಒಂದು ತಿಂಗಳಾಗುತ್ತಿದೆ. ಇನ್ನೆಷ್ಟು ದಿನಗಳ ಅಥವಾ ತಿಂಗಳುಗಳವರೆಗೆ ಅದು ಸಾಗುತ್ತದೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಈ ದುರಂತಕ್ಕೆ ಮೂಲಕಾರಣವಾದ ನ್ಯಾಟೋ ಮತ್ತು ಅಮೆರಿಕದ ಬೈಡೆನ್ ಆಡಳಿತದ ನೀತಿ ‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎನ್ನುವಂತಿದೆ.
ಕಳೆದ ಅಕ್ಟೋಬರ್ನಿಂದೀಚೆಗೆ 1.35 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರಗಳನ್ನು ಯೂಕ್ರೇನ್ಗೆ ನೀಡಿರುವ ಅಮೆರಿಕ ಈಗ 13.6 ಬಿಲಿಯನ್ ಡಾಲರ್ ಮೌಲ್ಯದ ಸೇನಾ ಸಹಾಯವನ್ನು ಘೊಷಿಸಿದೆ. ಅಂದರೆ ತನ್ನ ಅಂತಿಮ ಸೋಲನ್ನು ಯೂಕ್ರೇನ್ ಇನ್ನಷ್ಟು ಕಾಲ ಮುಂದೂಡಬಲ್ಲ ಸ್ಥಿತಿಯಲ್ಲಿರುತ್ತದೆ. ಅದೇ ಸಮಯದಲ್ಲಿ ಅಮೆರಿಕದ ಯೂರೋಪಿಯನ್ ನ್ಯಾಟೋ ಬಂಟ ದೇಶಗಳು ಪ್ರತಿದಿನವೂ ಸುಮಾರು 750 ಮಿಲಿಯನ್ ಡಾಲರ್ ಮೌಲ್ಯದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನು ರಷ್ಯಾದಿಂದ ಖರೀದಿಸುತ್ತಿವೆ.
ಅತಿ ಹೆಚ್ಚು ಚಿನ್ನ ಹೊಂದಿರುವ ಟಾಪ್ 10 ದೇಶಗಳಲ್ಲಿ ‘ಭಾರತ’ಕ್ಕೂ 8 ಸ್ಥಾನ
ಇದರರ್ಥ ಯುದ್ಧವನ್ನು ಮುಂದುವರಿಸುವುದಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚು ಹಣ ರಷ್ಯಾಗೆ ನ್ಯಾಟೋದಿಂದಲೇ ಬರುತ್ತಿದೆ! ಹೇಗಿದೆ ಅಂತಾರಾಷ್ಟ್ರೀಯ ರಾಜಕಾರಣ! ಒಟ್ಟಿನಲ್ಲಿ ರಷ್ಯನ್ ಕೋಲು ಇನಿತೂ ಮುಕ್ಕಾಗದೇ ಒಂದೇಸಮನೆ ಬಡಿಯುತ್ತಲೇ ಇರುತ್ತದೆ, ಯೂಕ್ರೇನ್ ಹಾವು ಒದ್ದಾಡಿಕೊಂಡೂ ಬದುಕಿಯೇ ಇರುತ್ತದೆ.
ಇರಲಿ, ಆ ಬಗ್ಗೆ ನಾವು ಏನೂ ಮಾಡುವ ಹಾಗಿಲ್ಲ. ಯಾಕೆಂದರೆ ಈ ಯುದ್ಧಕ್ಕೆ ಮೂಲಕಾರಣರಾದವರು, ಇವನ್ನು ಆರಂಭಿಸಿದವರು ನಾವಲ್ಲ. ನಾವೀಗ ಗಮನಿಸಬೇಕಾದ್ದು ನಮ್ಮದಲ್ಲದ ಈ ಯುದ್ಧದಿಂದಾಗಿ ನಾವು ಯಾರ್ಯಾರಿಂದಲೋ ಏನೇನೋ ಕೇಳಬೇಕಾಗಿರುವುದರ ಬಗ್ಗೆ, ಭೂತ ಭಗವದ್ಗೀತೆ ಹಿಡಿದು ನಮಗೆ ನೀತಿಪಾಠ ಹೇಳುತ್ತಿರುವುದರ ಬಗ್ಗೆ.
ಮೂರೂವರೆ ತಿಂಗಳುಗಳಿಂದಲೂ ಗಡಿಯಲ್ಲಿ ಕವಾಯಿತು ನಡೆಸುತ್ತಿದ್ದ ರಷ್ಯನ್ ಸೇನೆ ಎರಡು ತಿಂಗಳುಗಳಿಂದಲೂ ತನಗೆದುರಾಗಿ ನಿಂತಿದ್ದ ಯೂಕ್ರೇನ್ ಸೇನೆಯ ಪ್ರತಿಕ್ರಿಯಾಸಾಮರ್ಥ್ಯವನ್ನು ನಿರ್ಲಕ್ಷಿಸಿ ಫೆಬ್ರವರಿ 24ರಂದು ಆಕ್ರಮಣವೆಸಗುತ್ತಿದ್ದಂತೆ ಅಮೆರಿಕ, ಬ್ರಿಟನ್ ಸೇರಿದಂತೆ ಪಶ್ಚಿಮದ ದೇಶಗಳು ಮಾಸ್ಕೋ ವಿರುದ್ಧ ಕೂಗಾಡತೊಡಗಿದವಷ್ಟೇ.
ಆ ಕೂಗಾಟಕ್ಕೆ ಭಾರತ ದನಿಗೂಡಿಸಲಿಲ್ಲ. ಜತೆಗೆ ವಿಶ್ವಸಂಸ್ಥೆಯಲ್ಲಿ ಠರಾವು ಮಂಡನೆ, ವಾಗ್ವಾದ, ಮತದಾನದಲ್ಲೂ ಭಾರತ ಪಾಲ್ಗೊಳ್ಳಲಿಲ್ಲ. ‘ಯೂಕ್ರೇನ್ನ ಪ್ರಾದೇಶಿಕ ಸಮಗ್ರತೆ ಜತೆ ರಷ್ಯಾದ ರಕ್ಷಣಾ ಆತಂಕಗಳನ್ನು ಪರಿಗಣಿಸಬೇಕು, ರಾಜತಂತ್ರದ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಪ್ರಯತ್ನವಾಗಬೇಕು’ ಎಂಬ ಬುದ್ಧಿಮಾತನ್ನು ನವದೆಹಲಿ ಮತ್ತೆಮತ್ತೆ ಹೇಳಿತು. ಈ ನಿಲುವನ್ನು ರಷ್ಯಾ ಸ್ವಾಗತಿಸಿತು.
ಅತ್ತ ಅಮೆರಿಕ ತನ್ನ ಕೂಗಾಟದಲ್ಲಿ ಭಾರತ ಸೇರದ್ದರ ಬಗ್ಗೆ, ರಷ್ಯಾ ವಿರುದ್ಧ ಮತದಾನ ಮಾಡದಿದ್ದುದರ ಬಗ್ಗೆ ಬೇಜಾರನ್ನಾಗಲೀ, ಕೋಪವನ್ನಾಗಲೀ ಮಾಡಿಕೊಳ್ಳಲಿಲ್ಲ. ‘ರಷ್ಯಾ ಜತೆ ನಾವು ಹೊಂದಿರುವ ಸಂಬಂಧವೇ ಬೇರೆ, ಭಾರತ ಹೊಂದಿರುವ ಸಂಬಂಧವೇ ಬೇರೆ. ಅದು ಸಹಜವೇ ಬಿಡಿ. ಅದರಲ್ಲೇನೂ ತೊಂದರೆಯಿಲ್ಲ’ ಎಂದು ಹೇಳುವ ಮೂಲಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೖೆಸ್ ಪ್ರಸಕ್ತ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವಿನ ಬಗ್ಗೆ ಬೈಡೆನ್ ಆಡಳಿತದ ತಕರಾರೇನೂ ಇಲ್ಲ ಎಂದು ಸಾರಿದರು.
ಆದರೆ ಯುದ್ಧ ಮುಂದುವರಿದಂತೆ, ಅಮೆರಿಕ ಮತ್ತು ಯೂರೋಪಿಯನ್ ದೇಶಗಳು ರಷ್ಯಾ ಮೇಲೆ ವಿವಿಧ ಆರ್ಥಿಕ ಬಹಿಷ್ಕಾರಗಳನ್ನು ಹೇರತೊಡಗಿದಂತೆ ಭಾರತ ಮತ್ತು ಅದರಂತಹ ತಟಸ್ಥ ದೇಶಗಳ ಬಗ್ಗೆ ಅಮೆರಿಕದ ನೀತಿ ಬದಲಾಗತೊಡಗಿತು. ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಏರತೊಡಗಿದ್ದರಿಂದಾಗಿ ಉಂಟಾದ ಸಂಕಷ್ಟವನ್ನು ತುಸುವಾದರೂ ಪರಿಹರಿಸಿಕೊಳ್ಳುವ ಮಾರ್ಗವಾಗಿ ರಷ್ಯಾದಿಂದ ಮೂರು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಂಡದ್ದು ಅಮೆರಿಕದ ಕಣ್ಣು ಕೆಂಪಗಾಗಿಸಿತು.
ಈ ಬಗ್ಗೆ ಭಾರತವನ್ನು ಹೆಸರಿಸಿ ಮಾತಾಡಿದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಪ್ಸಾಕಿ- ‘ಮುಂದೆ ಇತಿಹಾಸದ ಪುಸ್ತಕಗಳು ರಚಿತವಾದಾಗ ಅವುಗಳಲ್ಲಿ ನೀವು ಯಾವ ಸ್ಥಾನ ಪಡೆಯುತ್ತೀರಿ ಎಂದು ಯೋಚಿಸಿ’ ಎಂದು ಹೇಳಿದರು.
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ಗೆ ಮೋದಿ ಆಹ್ವಾನ; ಏ.2ಕ್ಕೆ ಭಾರತ ಭೇಟಿ
ಪ್ಸಾಕಿ ಮತ್ತವರ ಸರ್ಕಾರದ ಪ್ರಕಾರ ರಷ್ಯಾದಿಂದ ಕೇವಲ ಮೂರು ಮಿಲಿಯನ್ ಬ್ಯಾರೆಲ್ ತೈಲ ಆಮದು ಮಾಡಿಕೊಂಡ ಭಾರತ ‘ಆಕ್ರಮಣಕಾರಿ, ಸರ್ವಾಧಿಕಾರಿ ದೇಶಕ್ಕೆ ಸಹಾಯಕವಾಗಿ ನಿಂತಿತು’ ಎಂದು ಇತಿಹಾಸದ ಪುಸ್ತಕಗಳಲ್ಲಿ ಬಿಂಬಿತವಾಗುತ್ತದಂತೆ! ಬೈಡೆನ್ ಸರ್ಕಾರದ ಈ ನಿಲುವು ಎರಡು ವಿಧಗಳಲ್ಲಿ ಅಸಮರ್ಪಕ.
ಒಂದು- ಅಮೆರಿಕ ಮತ್ತು ಅದರ ಯೂರೋಪಿಯನ್ ಮಿತ್ರರು ರಷ್ಯನ್ ತೈಲದ ಮೇಲೆ ಯಾವುದೇ ಬಹಿಷ್ಕಾರ ವಿಧಿಸಿಲ್ಲ. ಎರಡು- ಯುದ್ಧ ಆರಂಭವಾದ ವಾರದವರೆಗೂ ಅಮೆರಿಕವೇ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು, ನ್ಯಾಟೋ ದೇಶಗಳಂತೂ ಇಂದಿಗೂ ಪ್ರತಿದಿನವೂ ಮೂರರಿಂದ ನಾಲ್ಕು ಮಿಲಿಯನ್ ಬ್ಯಾರೆಲ್ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಲೇ ಇವೆ! ಅವುಗಳ ಬಗ್ಗೆ ಮುಂದೆ ಇತಿಹಾಸದ ಪುಸ್ತಕಗಳು ಏನು ಹೇಳಬಹುದು ಎಂದು ಬೈಡೆನ್ ಸರ್ಕಾರ ಯಾಕೆ ಯೋಚಿಸುವುದಿಲ್ಲ? ತನ್ನ ಸೇನಾಕೂಟದ ಮಿತ್ರರಿಗೇ ಒಂದು ನ್ಯಾಯ, ಭಾರತಕ್ಕೇ ಒಂದು ನ್ಯಾಯ ಎಂದು ಬೈಡೆನ್ ಆಡಳಿತ ತಿಳಿಯುವುದಾದರೆ ಅದನ್ನು ಸರಳ ಭಾಷೆಯಲ್ಲಿ ‘ಆಷಾಡಭೂತಿತನ’ ಎಂದು ಕರೆಯುತ್ತಾರೆ.
ಇನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ, ಸಾಮಾನ್ಯ ಸಭೆ ಹಾಗೂ ಮಾನವಹಕ್ಕುಗಳ ಆಯೋಗಗಳಲ್ಲಿ ರಷ್ಯಾ ವಿರುದ್ಧ ಅಮೆರಿಕ ಮತ್ತದರ ಮಿತ್ರದೇಶಗಳು ಮಂಡಿಸಿದ ಗೊತ್ತುವಳಿಗಳ ಪರವಾಗಿ ಭಾರತ ಮತ ಹಾಕದೇ ತಟಸ್ಥವಾಗಿ ಉಳಿದದ್ದು ತಪ್ಪೆನ್ನುವುದಾದರೆ ಆ ತಪ್ಪನ್ನು ಚೀನಾ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ 35 ದೇಶಗಳು ಮಾಡಿವೆ ಮತ್ತು ಆ ಪ್ರಕಾರ ಪ್ರಪಂಚದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ತಟಸ್ಥ ನಿಲುವು ತಳೆದಿದ್ದಾರೆ!
ಭೂ ಕಬಳಿಕೆ ಪ್ರಕರಣಗಳಿಗೆ ಸಿಗದ ತಾರ್ಕಿಕ ಅಂತ್ಯ, ಸರ್ಕಾರ ನೀಡಿದ್ದ ಭರವಸೆಗಳೆ ಮುಕ್ತಾಯ
ಈಗ ಬೈಡೆನ್ ಆಡಳಿತದ ಆಷಾಡಭೂತಿತನದ ಮತ್ತೊಂದು ಮಗ್ಗುಲನ್ನು ನೋಡೋಣ. 1846-48ರಲ್ಲಿ ನೆರೆಯ ಬಲಹೀನ ಮೆಕ್ಸಿಕೋದಿಂದ ಕ್ಯಾಲಿಫೋರ್ನಿಯಾ ಸೇರಿದಂತೆ ಬೃಹತ್ ಪ್ರದೇಶವನ್ನು ಕಬಳಿಸಿದಂದಿನಿಂದ ಹಿಡಿದು ದಶಕದ ಹಿಂದೆ ಸಿರಿಯಾದಲ್ಲಿ ಹೆಂಗಸರು ಮಕ್ಕಳು ಸೇರಿದಂತೆ ಸಾವಿರಗಟ್ಟಲೆ ನಾಗರಿಕರನ್ನು ಅಮೆರಿಕ ನಿರ್ದಯವಾಗಿ ಕೊಂದಿದೆ.
ಕೇವಲ ವಿಯೆಟ್ನಾಂ ಯುದ್ಧವೊಂದನ್ನೇ ತೆಗೆದುಕೊಳ್ಳುವುದಾದರೆ ಪಾಲ್ ಎಂ. ಕಾಟೆನ್ಬರ್ಗ್, ಆಚಿಟನಿ ಲೇಕ್, ಸ್ಟಾಯನ್ಲಿ ಕಾನೋವ್, ನೋಆಂ ಚೋಮ್್ಸಕಿ, ಜಾರ್ಚ್ ಸಿ ಹೆರಿಂಗ್ ಜಾನ್ ಸ್ಟೋಯ್ಸಿಂಗರ್ ಸೇರಿದಂತೆ ಕನಿಷ್ಟ ನೂರು ಅಮೆರಿಕನ್ ವಿದ್ವಾಂಸರೇ ರಚಿಸಿರುವ ಇತಿಹಾಸ ಪುಸ್ತಕಗಳಲ್ಲಿ ಮಾನವಂತ ಹಾಗೂ ಮಾನವೀಯ ಅಮೆರಿಕನ್ನರೆಲ್ಲರೂ ತಲೆತಗ್ಗಿಸಿ ನಿಲ್ಲಬೇಕಾದ ಸ್ಥಾನವನ್ನು ಅಮೆರಿಕ ಪಡೆದುಕೊಂಡಿದೆ. ಅದರ ಒಂದಿಷ್ಟು ವಿವರಗಳಿವು-
ವಿಯೆಟ್ನಾಂ ಯುದ್ಧ ಜಾಗತಿಕ ಇತಿಹಾಸದ ಒಂದು ಕರಾಳ ಹಾಗೂ ಹೃದಯವಿದ್ರಾವಕ ಅಧ್ಯಾಯ. ಪುಟ್ಟ ವಿಯೆಟ್ನಾಂ ಮೇಲೆ ಅಮೆರಿಕ ಪ್ರಯೋಗಿಸಿದ ಬಾಂಬ್ಗಳ ಸಂಖ್ಯೆ ಇಡೀ ಎರಡನೆಯ ಮಹಾಯದ್ಧದಲ್ಲಿ ಬಳಸಲಾದ ಒಟ್ಟು ಬಾಂಬ್ಗಳಿಗಿಂತಲೂ ಅಧಿಕ! ಅದು ಸಾಲದು ಎಂಬಂತೆ, ಮನುಷ್ಯರ ಜತೆ ಗಿಡಮರಗಳಿಗೂ ಹಾನಿಯೆಸಗುವ ರಾಸಾಯನಿಕ ಅಸ್ತ್ರಗಳನ್ನೂ ವಿಯಟ್ನಾಂನಲ್ಲಿ ಎಲ್ಲೆಂದರಲ್ಲಿ ಚೆಲ್ಲಾಡಿದರು.
ಆ ಯುದ್ಧವನ್ನು ಅಮೆರಿಕ ಆರಂಭಿಸಿದ್ದು ಒಂದು ಸುಳ್ಳಿನಿಂದ, ಆ ಸುಳ್ಳನ್ನು ಹೇಳಿದ್ದು ಅಧ್ಯಕ್ಷ ಲಿಂಡನ್ ಬಿ ಜಾನ್ಸನ್ ಎಂದರೆ ನಿಮಗೆ ಅಚ್ಚರಿಯಾಗುತ್ತದೆಯೇ? ಆ ಕಥೆ ಕೇಳಿ. 1964ರ ಆಗಸ್ಟ್ 2ರಂದು ಉತ್ತರ ವಿಯೆಟ್ನಾಂನ ಪೂರ್ವಕ್ಕಿರುವ ಟಾಂಕಿನ್ ಕೊಲ್ಲಿಯಲ್ಲಿದ್ದ ಅಮೆರಿಕನ್ ನೌಕೆ ಯುಎಸ್ಎಸ್ ಟರ್ನರ್ ಜಾಯ್ ಮೇಲೆ ಉತ್ತರ ವಿಯೆಟ್ನಾಮೀ ಪಹರೆ ದೋಣಿಗಳು ದಾಳಿಯೆಸಗಿದವೆಂದೂ, ಎರಡು ದಿನಗಳ ನಂತರ ಅದೇ ಸ್ಥಳದಲ್ಲಿ ಮತ್ತೊಂದು ಅಮೆರಿಕನ್ ನೌಕೆ ಯುಎಸ್ಎಸ್ ಮ್ಯಾಡಾಕ್ಸ್ ಮೇಲೆಯೂ ದಾಳಿಯಾಯಿತೆಂದೂ ಅಮೆರಿಕನ್ ಸಂಸತ್ತಿನಲ್ಲಿ ಪ್ರಜಾಪ್ರತಿನಿಧಿಗಳಿಗೆ ವಿವರಿಸಿದ ಅಧ್ಯಕ್ಷ ಜಾನ್ಸನ್- ‘ಅಮೆರಿಕದ ನೌಕೆಗಳ ಮೇಲೆ ನಡೆದ ದಾಳಿ ಅಮೆರಿಕದ ಮೇಲೆಯೇ ನಡೆದ ದಾಳಿ’ ಎಂದು ಬಣ್ಣಿಸಿ,
ಬೆಲೆಯೇರಿಕೆ ಬಗೆಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ವಿಧಾನಸೌಧದ ಮೊಗಸಾಲೆಯಲ್ಲಿ ಮಾತನಾಡಿದರು
ಪ್ರತೀಕಾರ ಕ್ರಮಗಳನ್ನು ಕೈಗೊಳ್ಳಲು ಅನುಮತಿ ನೀಡಬೇಕೆಂದು ಕಳಕಳಿಯಿಂದ ಬೇಡಿಕೊಂಡರು. ಅವರ ವಿವರಣೆಗಳನ್ನು ನಂಬಿದ ಪ್ರತಿನಿಧಿಗಳು ಭಾರಿ ಬಹುಮತದೊಂದಿಗೆ ಅಂಗೀಕರಿಸಿದ್ದು ಐತಿಹಾಸಿಕ ‘ಟಾಂಕಿನ್ ಕೊಲ್ಲಿ ನಿರ್ಣಯ’ (ಖಟ್ಞkಜ್ಞಿ ಎl ್ಕಠಟ್ಝ್ಠಜಿಟ್ಞ). ಇದರ ಪ್ರಕಾರ ಅಮೆರಿಕದ ಮೇಲೆ, ಅದರ ಹಿತಾಸಕ್ತಿಗಳ ಮೇಲೆ ಯಾರೇ ದಾಳಿ ನಡೆಸಿದರೆ ಅಮೆರಿಕದ ಹಿತ ಕಾಪಾಡಲು ಅಗತ್ಯವಾದ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳಲು ಅಧ್ಯಕ್ಷರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆಯಿತು. ಹಾಗೂ ಆ ನಿರ್ಣಯಗಳನ್ನು ಜಾರಿಗೆ ತರಲು ಅಧ್ಯಕ್ಷರು ಸಂಸತ್ತಿನ ಅನುಮತಿ ಪಡೆಯುವ ಅಗತ್ಯವಿರಲಿಲ್ಲ. ಈ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡ ಅಧ್ಯಕ್ಷ ಜಾನ್ಸನ್ ಉತ್ತರ ವಿಯೆಟ್ನಾಮ್ ವಿರುದ್ಧ ಪ್ರತೀಕಾರಕ್ಕೆ ಮುಂದಾದರು.
‘ಪ್ರತೀಕಾರ ಕ್ರಮ’ದ ಮೊದಲ ಹಂತವಾಗಿ 1965ರ ಫೆಬ್ರವರಿಯಲ್ಲಿ ಉತ್ತರ ವಿಯೆಟ್ನಾಂ ರಾಜಧಾನಿ ಹನೋಯ್ ಮತ್ತು ಪ್ರಮುಖ ಬಂದರು ಹೈಫಾಂಗ್ಗಳ ಮೇಲೆ ಱಣಟಛ್ಟಿಚಠಿಜಿಟ್ಞ ್ಕlಜ್ಞಿಜ ಖಜ್ಠ್ಞಛ್ಟಿಱ ಎಂದು ಕರೆಯಲಾಗುವ ನಿರಂತರ ಬಾಂಬ್ ದಾಳಿ ಆರಂಭವಾಯಿತು. ಅದರ ಮುಂದಿನ ದಿನಗಳಲ್ಲಿ ಅಮೆರಿಕನ್ ಸೈನಿಕರು ದಕ್ಷಿಣ ವಿಯೆಟ್ನಾಂಗೆ ಬರಲಾರಂಭಿಸಿದರು.
ವರ್ಷಾಂತ್ಯದ ಹೊತ್ತಿಗೆ ಅವರ ಸಂಖ್ಯೆ ಮೂರು ಲಕ್ಷ ದಾಟಿತ್ತು. ಇಪ್ಪತ್ತನೆಯ ಶತಮಾನದ ಇತಿಹಾಸದ ಕರಾಳ ಅಧ್ಯಾಯವೊಂದು ಆರಂಭವಾಗಿತ್ತು. ಆದರೆ ಟಾಂಕಿನ್ ಕೊಲ್ಲಿಯಲ್ಲಿ ಅಮೆರಿಕದ ನೌಕೆಗಳ ಮೇಲೆ ಯಾವ ದಾಳಿಯೂ ನಡೆದಿರಲಿಲ್ಲವೆಂಬ ಸತ್ಯ ಆ ದಶಕದ ಅಂತ್ಯದ ಹೊತ್ತಿಗೆ ಬಹಿರಂಗಗೊಂಡಿತು. ಅಂದರೆ ಅಧ್ಯಕ್ಷ ಜಾನ್ಸನ್ ಪ್ರಜಾಪ್ರತಿನಿಧಿಗಳಿಗೆ, ಅಮೆರಿಕ ಜನತೆಗೆ, ಇಡೀ ಜಗತ್ತಿಗೆ ದೊಡ್ಡ ಸುಳ್ಳೊಂದನ್ನು ಹೇಳಿದ್ದರು!
ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ನಿರ್ಬಂಧ-ಮಾಹಿತಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ: ಆರಗ ಜ್ಞಾನೇಂದ್ರ
ವಾಸ್ತವವಾಗಿ ನಡೆದಿದ್ದೇನೆಂದರೆ ತಮ್ಮ ಕೈಗೊಂಬೆ ದಕ್ಷಿಣ ವಿಯೆಟ್ನಾಂ ಕಮ್ಯೂನಿಸ್ಟ್ ಉತ್ತರ ವಿಯೆಟ್ನಾಂನ ಕೈಗೆ ಬೀಳದಂತೆ ತಡೆಯಬೇಕಾದರೆ ಅಮೆರಿಕನ್ ಸೇನೆ ಯುದ್ಧದಲ್ಲಿ ನೇರವಾಗಿ ಭಾಗವಹಿಸಿ ಉತ್ತರ ವಿಯೆಟ್ನಾಂನ ಸೇನೆಯನ್ನು ಬಗ್ಗುಬಡಿಯುವುದೊಂದೇ ಮಾರ್ಗ ಎಂಬ ನಿರ್ಧಾರಕ್ಕೆ ಅಧ್ಯಕ್ಷ ಜಾನ್ಸನ್ ಬಂದಿದ್ದರು.
ಆಗ ನೇರವಾಗಿ ಯುದ್ಧಕ್ಕಿಳಿಯಲು ಸಕಾರಣವೊಂದು ಬೇಕಾಯಿತು. ಆದರೆ ತಿಂಗಳುಗಟ್ಟಲೆ ಕಾದರೂ ಅಂತಹ ಯಾವ ಸಕಾರಣವೂ, ನೆಪವೂ ಅವರಿಗೆ ಸಿಗಲಿಲ್ಲ. ಕೊನೆಗೆ ತಾಳ್ಮೆಗೆಟ್ಟ ಅಧ್ಯಕ್ಷ ಜಾನ್ಸನ್ ಟಾಂಕಿನ್ ಕೊಲ್ಲಿಯಲ್ಲಿ ಅಮೆರಿಕನ್ ನೌಕೆಗಳ ಮೇಲೆ ಉತ್ತರ ವಿಯೆಟ್ನಾಮೀಯರು ದಾಳಿ ನಡೆಸಿದರೆಂಬ ಹಸೀಹಸೀ ಸುಳ್ಳೊಂದನ್ನು ಸೃಷ್ಟಿಸಿ, ಅಮೆರಿಕನ್ ಶಾಸಕರಿಗೆ ಭಾವನಾತ್ಮಕ ಮಂಕುಬೂದಿ ಎರಚಿ ಅವರ ಅನುಮತಿ ಪಡೆದುಕೊಂಡು ಯುದ್ಧಕ್ಕಿಳಿದೇಬಿಟ್ಟರು!
ಹೀಗೆ ಅಮೆರಿಕವನ್ನು ಬಡ ವಿಯೆಟ್ನಾಂ ಮೇಲೆ ಎರಗುವಂತೆ ಮಾಡುವಲ್ಲಿ ಜಾನ್ಸನ್ರ ಕಮ್ಯೂನಿಸ್ಟ್-ವಿರೋಧಿ ಮನೋಭಾವವೊಂದೇ ಇತ್ತೇ? ಇರಲಾರದು ಎಂದು ನನ್ನ ಅನಿಸಿಕೆ. ಯುದ್ಧ ಆರಂಭವಾದ ನಂತರ ಅದರ ಬಗ್ಗೆ ಜಾನ್ಸನ್ ವ್ಯಕ್ತಪಡಿಸಿದ ಕೆಲವೊಂದು ಅಭಿಪ್ರಾಯಗಳು ಅವರೊಬ್ಬ ಮಾನಸಿಕ ಅಸ್ವಸ್ಥರಾಗಿದ್ದರೆಂಬ, ಒಂದು ಬಗೆಯಲ್ಲಿ ‘ಸ್ಯಾಡಿಸ್ಟ್’ ಆಗಿದ್ದರೆಂಬ ಅನುಮಾನವನ್ನು ನನ್ನಲ್ಲುಂಟುಮಾಡುತ್ತವೆ.
ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್ ಮಹತ್ವದ ಆದೇಶ
ಅವರ ಕೆಲ ಆರ್ಥಿಕ ಮತ್ತು ರಾಜಕೀಯ ತೀರ್ವನಗಳಿಂದಾಗಿ ಸ್ವದೇಶದಲ್ಲಿ ಅವರಿಗೆ ವಿರೋಧ ಹೆಚ್ಚತೊಡಗಿದಾಗ ಅವರೊಮ್ಮೆ ಉದ್ಗರಿಸಿದ್ದು ಹೀಗೆ- ‘ಇಲ್ಲಿ (ಅಮೆರಿಕದಲ್ಲಿ) ಬೇಸರವಾಗುವಂಥ ಬೆಳವಣಿಗೆಗಳು ನಡೆದಾಗಲೆಲ್ಲ ನಾನು ವಿಯೆಟ್ನಾಂನಿಂದ ಬಂದ ಸುದ್ದಿಗಳತ್ತ ಗಮನ ಹರಿಸುತ್ತೇನೆ. ಆಗ ನನಗೆ ಖುಷಿಯಾಗುತ್ತದೆ’.
ಅಂದರೆ ತನ್ನ ಸೇನೆ ದೂರದ ಇನ್ನೊಂದು ದೇಶದಲ್ಲಿ ನಡೆಸುತ್ತಿದ್ದ ನರಮೇಧದಿಂದ ಈ ಅಧ್ಯಕ್ಷರಿಗೆ ಖುಷಿಯಾಗುತ್ತಿತ್ತು! ಇದಿಷ್ಟೇ ಅಲ್ಲ, ಫೆಬ್ರವರಿ 1965ರಲ್ಲಿ ಹನೋಯ್ ಮತ್ತು ಹೈಫಾಂಗ್ಗಳ ಮೇಲಿನ ಅಮೆರಿಕನ್ ಬಾಂಬ್ ದಾಳಿ ಆರಂಭವಾಯಿತಷ್ಟೇ. ಅಲ್ಲಿ ನೂರಾರು ವಿಯೆಟ್ನಾಮೀಯರು ಹತರಾದ, ಹಲವಾರು ಕಟ್ಟಡಗಳು ನೆಲಸಮವಾದ ಸುದ್ದಿ ಬಂದಾಗ ಜಾನ್ಸನ್ ಬಡಾಯಿ ಕೊಚ್ಚಿಕೊಂಡದ್ದು ಹೀಗೆ- ‘ನಾನು ಹೊ ಚಿ ಮಿನ್ನ ಮಾನಭಂಗವನ್ನಷ್ಟೇ ಮಾಡಲಿಲ್ಲ, ಅವನ ಶಿಶ್ನವನ್ನೂ ಕತ್ತರಿಸಿಹಾಕಿಬಿಟ್ಟೆ’.
ಅಧ್ಯಕ್ಷ ಜಾನ್ಸನ್ಗೆ ಅವರು ಆರಂಭಿಸಿದ ಅಮಾನುಷ, ಅನಗತ್ಯ ಯುದ್ಧಕ್ಕಾಗಿ ಯಾವ ಶಿಕ್ಷೆಯೂ ಆಗಲಿಲ್ಲ. ಆದರೆ ಅದೇ ಅಮೆರಿಕನ್ನರು ಈಗ ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪೂತಿನ್ರನ್ನು ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ನಲ್ಲಿ ಯುದ್ಧಾಪರಾಧಗಳಿಗಾಗಿ ವಿಚಾರಣೆಗೊಳಿಸಬೇಕೆಂದು ಕೂಗುತ್ತಿದ್ದಾರೆ. ಇದು ಇತಿಹಾಸ ಹಾಗೂ ವರ್ತಮಾನಗಳೆರಡರಲ್ಲೂ ಅಮೆರಿಕ ಗಳಿಸಿರುವ ನೂರೊಂದು ‘ಸ್ಥಾನ’ಗಳಲ್ಲೊಂದು. ಜೆನ್ ಪ್ಸಾಕಿ, ಇಷ್ಟು ಸಾಕೇ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
