ರೈತರ ಬೆಳೆ ಸಂಪೂರ್ಣ ವಿಫಲ 

ಚಳ್ಳಕೆರೆ:

ತಾಲ್ಲೂಕಿನಾದ್ಯಂತ ರೈತರ ಬೆಳೆ ಸಂಪೂರ್ಣ ವಿಫಲ  ಸರ್ಕಾರ ರೈತರಿಗೆ ತುರ್ತು ಪರಿಹಾರ ಘೋಷಿಸಬೇಕು ಎ.ನಾಗರಾಜು. ಪ್ರಸ್ತುತ ವರ್ಷದ ಶೇಂಗಾ ಬೆಳೆಯೂ ಸೇರಿದಂತೆ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ವಿಫಲಗೊಂಡು ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ನಷ್ಟ ಪರಿಹಾರವನ್ನು ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಿವಕುಮಾರಸ್ವಾಮಿ, ಕಿಸಾನ್ ಘಟಕದ ಅಧ್ಯಕ್ಷ ಎ.ನಾಗರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅವರು, ಬುಧವಾರ ಸಿದ್ದೇಶ್ವರದುರ್ಗ ಗ್ರಾಮದಲ್ಲಿ ಬೆಳೆ ವಿಮಾ ಕಂಪನಿಯ ಮಾನದಂಡದಂತೆ 5 ಮೀಟರ್ ಸುತ್ತಳತೆ ವ್ಯಾಪ್ತಿಯ ಶೇಂಗಾ ಕಾಯಿಗಳ ತೂಕ ಮಾಡಿದಾಗ ಹೆಚ್ಚಿನ ಇಳುವಳಿ ಕಂಡುಬರಲಿಲ್ಲ. ನಿಗದಿತ ಪ್ರಮಾಣಕ್ಕಿಂತ ಅತಿ ಕಡಿಮೆ ಪ್ರಮಾಣದಲ್ಲಿ ಶೇಂಗಾವಿದ್ದು ಪೂರ್ಣ ಪ್ರಮಾಣದಲ್ಲಿ ಬೆಳೆನಷ್ಟವಾಗಿದೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ. ಬೆಳೆ ವಿಮೆ ಕಂಪನಿಯವರೂ ಸಹ ಶೇ.90ರಷ್ಟು ಹೆಚ್ಚು ಭಾಗ ನಷ್ಟವಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ರೈತರಿಗೆ ನಷ್ಟದ ಪ್ರಮಾಣವನ್ನು ದೊರಕಿಸಿಕೊಡುವಲ್ಲಿ ಮುಂದಾಗಬೇಕು ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಿವಕುಮಾರಸ್ವಾಮಿ, ಪಿಡಿಒ ಈರಣ್ಣ, ವಿಮಾ ಕಂಪನಿ ಪ್ರತಿನಿಧಿ ರಾಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಿಶಿವಣ್ಣ, ಸದಸ್ಯರಾದ ನರಸಿಂಹಮೂರ್ತಿ, ಪ್ರಭಾಕರ, ರಾಘು, ಹರೀಶ್, ಹನುಮಂತರಾಯಪ್ಪ, ರಮೇಶ್, ಪ್ರಶಾಂತ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link