ಬಾಗಲಕೋಟೆ : ಮಕ್ಕಳ ಹಸಿವೆ ತೀರಿಸದ ಅಂಗನವಾಡಿ ಆಹಾರ….!

ಬಾಗಲಕೋಟೆ

   ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ  ಹುನಗುಂದ  ಮತ್ತು ಇಳಕಲ್  ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕಳೆದ ಮೂರು ತಿಂಗಳಿನಿಂದ ರೇಷನ್​ ಸರಬರಾಜು ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಅಂಗನವಾಡಿ ಮಕ್ಕಳು ನಿತ್ಯ ಅರ್ಧಂಬರ್ಧ ಊಟ ಮಾಡುತ್ತಿವೆ. ಅಂಗನವಾಡಿಗಳಿಂದ ತಮಗೆ ಬರಬೇಕಿದ್ದ ಸಮರ್ಪಕ ಪೌಷ್ಟಿಕ ಆಹಾರ ಬಾರದೆ ಗರ್ಭಿಣಿಯರು ನೊಂದಿದ್ದಾರೆ.

   ಜುಲೈ, ಅಗಷ್ಟ್, ಸೆಪ್ಟೆಂಬರ್ ತಿಂಗಳ ರೇಷನ್​​ ಅಂಗನವಾಡಿ ಕೇಂದ್ರಗಳಿಗೆ ತಲುಪಿಲ್ಲ. ರೇಷನ್​ ಸರಬರಾಜು ಆಗದೆ ಇರುವುದನ್ನು ಹುನಗುಂದ ಸಿಡಿಪಿಒ ಒಪ್ಪಿಕೊಂಡಿದ್ದಾರೆ. ಮೂರು ತಿಂಗಳ ಎಮ್​ಎಸ್​​ಪಿಟಿಸಿ ನಲ್ಲೇ ಕೊಳೆಯುತ್ತಿದೆ.

   ಎಮ್​ಎಸ್​ಪಿಟಿಸಿನಿಂದ ಎಲ್ಲ ಅಂಗನವಾಡಿಗೆ ರೇಷನ್ ಸಾಗಿಸಬೇಕು. ಆದರೆ ಯಾವ ಕಾರಣಕ್ಕೆ ಹಂಚಿಕೆಯಾಗಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಮಾತ್ರ ಉತ್ತರ ಇಲ್ಲ. ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಈ ನ್ಯೂನ್ಯತೆ ನಡುವೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವತಿಯಿಂದ ಪೋಷಣ್​ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆದಿದೆ.