ಅಯೋಧ್ಯೆ : ಮಸೀದಿ ನಿರ್ಮಾಣಕ್ಕೆ ಅನುಮೋದನೆ..!

ನವದೆಹಲಿ:

       ವಿವಾದಿತ ಅಯೋಧ್ಯ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ ಗೆ  ನೀಡಿದ ಭೂಮಿಯಲ್ಲಿ ಅಯೋಧ್ಯೆ ಮಸೀದಿ ನಿರ್ಮಾಣಕ್ಕೆ ಇದ್ದ ತೊಡಕುಗಳನ್ನು  ಕೊನೆಗೂ ಇತ್ಯರ್ಥವಾಗಿದ್ದು,  ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಭೂ ಬಳಕೆಯನ್ನು ಬದಲಾಯಿಸಿ ಅನುಮೋದನೆ ನೀಡಿದೆ.

    ಅಯೋಧ್ಯೆಯ ಧನ್ನಿಪುರದಲ್ಲಿ ಸರ್ಕಾರ ನೀಡಿದ 5 ಎಕರೆ ಕೃಷಿ ಭೂಮಿಯನ್ನು ಭೂ ಬಳಕೆ ಮಾಡುವ ಕುರಿತು ಪ್ರಾಧಿಕಾರ ಬದಲಾವಣೆ ಮಾಡಿದ ನಂತರ ಮಸೀದಿ ನಿರ್ಮಾಣಕ್ಕೆ ಅನುಮೋದನೆ ದೊರೆದಂತಾಗಿದೆ. ಮಸೀದಿ ನಿರ್ಮಾಣದ ಯೋಜನೆಗೂ ಶೀಘ್ರವೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಈ ಕುರಿತು ಅಯೋಧ್ಯೆ ಪಾಲಿಕೆ ಆಯುಕ್ತ ವಿಶಾಲ್ ಸಿಂಗ್ ಮಾತನಾಡಿ, ‘ಕೃಷಿ ಭೂಮಿ ಬಳಕೆ ಬದಲಿಸಿ ಮಸೀದಿ ನಿರ್ಮಾಣಕ್ಕೆ ಎಡಿಎ ಮಂಡಳಿ ಅನುಮತಿ ನೀಡಿದೆ. ಇದಾದ ಬಳಿಕ ಮಸೀದಿ ನಿರ್ಮಾಣದ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಹೇಳಿದ್ದಾರೆ.

     ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸ್ಥಾಪಿಸಿದ ಅಯೋಧ್ಯೆ ಮಸೀದಿ ಟ್ರಸ್ಟ್ – ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ 2021 ರಲ್ಲಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ನಕ್ಷೆಗಳನ್ನು ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ತನ್ನ ಅಯೋಧ್ಯೆ ತೀರ್ಪಿನಲ್ಲಿ 09 ನವೆಂಬರ್ 2019 ರಂದು ಅಯೋಧ್ಯೆ ತೀರ್ಪಿನ ಅಡಿಯಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಆಕ್ಟ್ 1993 ಅಥವಾ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅಯೋಧ್ಯೆಯ ಯಾವುದೇ ಸೂಕ್ತ ಪ್ರಮುಖ ಸ್ಥಳದಲ್ಲಿ 5 ಎಕರೆ ಸೂಕ್ತವಾದ ಭೂಮಿಯನ್ನು ಮಂಜೂರು ಮಾಡಲು ಆದೇಶಿಸಲಾಗಿತ್ತು. ಅದರಂತೆ ಇದೀಗ ಧನ್ನಿಪುರದಲ್ಲಿ ಸರ್ಕಾರ ನೀಡಿದ 5 ಎಕರೆ ಕೃಷಿ ಭೂಮಿಯನ್ನು ಭೂ ಬಳಕೆ ಮಾಡುವ ಕುರಿತು ಪ್ರಾಧಿಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ ಎಂದು ಅಯೋಧ್ಯೆ ಆಯುಕ್ತ ಹಾಗೂ ಎಡಿಎ ಅಧ್ಯಕ್ಷ ಗೌರವ್ ದಯಾಳ್ ಟ್ರಸ್ಟ್‌ಗೆ ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap