ಹುಬ್ಬಳ್ಳಿ:
ಕೇವಲ ಒಂದು ಟಿಕೆಟ್ಗಾಗಿ ತತ್ವ- ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಪಕ್ಷ ಬಿಟ್ಟುಹೋಗಿದ್ದೇನೆ ಎಂದು ಜೋಶಿ ಅವರು ಹೇಳಿಕೆ ನೀಡಿದ್ದಾರೆ. ಇದು ಕೇವಲ ಟಿಕೆಟ್ ಪ್ರಶ್ನೆ ಅಲ್ಲ. ನನ್ನ ಸ್ವಾಭಿಮಾನದ ಪ್ರಶ್ನೆಯೂ ಇದರಲ್ಲಿ ಅಡಗಿದೆ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
‘ಪಕ್ಷ ಬಿಟ್ಟು ಹೋಗಿದ್ದಕ್ಕೆ ನನ್ನ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲಘುವಾಗಿ ಮಾತನಾಡಿದ್ದಾರೆ. ನಾನು ಸಂಘರ್ಷಕ್ಕೆ ಇಳಿದ ಮೇಲೆ ಆ ಸ್ಥಾನ, ಈ ಸ್ಥಾನ ನೀಡುವ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ. ಜೋಶಿ ಅವರೇ ಇದು ಬಹಳ ದಿನ ನಡೆಯಲ್ಲ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದರ ಪರಿಣಾಮ ಗೊತ್ತಾಗಲಿದೆ’ ಎಂದು ಜಗದೀಶ ಶೆಟ್ಟರ್ ಎಚ್ಚರಿಕೆ ನೀಡಿದರು.
‘ನನ್ನದು ಒಂದೆ ಪ್ರಶ್ನೆ. ಕೊನೆಯ ಕ್ಷಣದಲ್ಲಿ ನನಗೆ ಟಿಕೆಟ್ ಏಕೆ ತಪ್ಪಿಸಿದೀರಿ? ವಾರದ ಮುಂಚೆ ಕರೆದು ಕುಳಿತು ಮಾತನಾಡಿಸಲಿಲ್ಲವೇಕೆ? ಗೌರವಯುತವಾಗಿ ಏಕೆ ನಡೆಸಿಕೊಳ್ಳಲಿಲ್ಲ? ನಾನು ಸಂಘರ್ಷಕ್ಕೆ ಇಳಿದ ಮೇಲೆ ನನ್ನ ಜೊತೆ ಮಾತುಕತೆ ನಡೆಸಲು ಬಂದಿದ್ದೀರಿ. ಯಾಕೆ ಟಿಕೆಟ್ ನಿರಾಕರಿಸಿದೀರಿ ಎನ್ನುವುದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ’ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/04/jagadeesh-shettar.jpg)