ಎರಡು ಕಡೆಯಲ್ಲೂ ಸಮಾಜ ಒಡೆಯುವವರಿದ್ದಾರೆ 

ತುಮಕೂರು:                     

ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ವಿರೂಪ ಘಟನೆ ನಡೆಬಾರದಂತಹ ಘಟನೆ. ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಜನ ಎರಡು ಕಡೆ ಇದ್ದಾರೆ ಎಂದು ಸಚಿವ ಬಿ.ಸಿ.ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶಕ್ಕಾಗಿ ಪ್ರಾಣ ಕೊಟ್ಟವರು, ಜೀವನ ಅರ್ಪಿಸಿದವರ ಪ್ರತಿಮೆಯನ್ನು ಭಗ್ನಗೊಳಿಸುವುದಾಗಲೀ, ಮಸಿ ಬಳಿಯುವುದಾಗಲೀ ಮಾಡುವುದು ಖಂಡನೀಯ. ಸರ್ಕಾರ ಈ ಪುಂಡರ ವಿರುದ್ಧ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದರು.

ಕಾಂಗ್ರೆಸ್ಸಿನವರಿಗೆ ನಿರಂತರ ಸೋಲಿನ ಕಾರಣ ದೇಶದಲ್ಲಿ ಆಡಳಿತ ನಡೆಸುವುದೇಗೇ? ಕಾನುನಿನ ಅನುಷ್ಠಾನವೆಲ್ಲ ಮರೆತುಹೋಗಿ. ಕೇಂದ್ರ ಕೃಷಿ ಸಂಬಂಧಿತ ಕಾಯ್ದೆಗಳನ್ನು ವಾಪಸ್ ಪಡೆದ ಮೇಲೆ ರಾಜ್ಯದಲ್ಲಿ ಜಾರಿಗೊಳಿಸಿದಅದಕ್ಕೆ ಪೂರಕ ಕಾಯ್ದೆಗಳು ಅಸ್ಥಿತ್ವದಲ್ಲಿ ಇರುವುದಿಲ್ಲ. ಅದರ ಪರಿವೇ ಇಲ್ಲದೆ ಸದನದಲ್ಲಿ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆಂದರು.

ಕೊರೊನಾ 3ನೇ ಅಲೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದ ಅವರು ದೇಶದಲ್ಲಿ ಎಲ್ಲಿಯೂ ಸಹ ಆತಂಕಪಡುವ ಅವಶ್ಯಕತೆಯಿಲ್ಲ. ಹೊರದೇಶದಲ್ಲಿ ಗಂಭೀರ ಸ್ಥಿತಿ ಹೋಗಿ ಎಷ್ಟೋ ತಿಂಗಳಾಯಿತು. ನಮ್ಮ ದೇಶದಲ್ಲಿ ಅಂತದ್ದು ಏನು ಆಗಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು ಎಂದರು.

ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಕುರಿತು ಪ್ರತಿಕ್ರಿಯಿಸಿ ಬಿಜೆಪಿ ಸೋತಿಲ್ಲ. 6 ಇದ್ದುದರಲ್ಲಿ 11ಸ್ಥಾನ ಗೆದ್ದಿದ್ದೆವೆ. ಹೊಸ ಅಭ್ಯರ್ಥಿಯಾಕಿ ಪ್ರಯೋಗ ಮಾಡಿದ್ದೇವೆ. ಉತ್ತಮ ಮತಗಳಿಕೆಯಾಗಿದೆ. ನಾಯಕರ ಒಡಕು, ಒಡೆದ ಮನೆ ಇವೆಲ್ಲ ಸೋತಾಗ ಹುಟ್ಟುವ ಕಾರಣಗಳು ಎಂದು ಹೇಳಿದರು.

ಸರಕಾರಿ-ಖಾಸಗಿ ಹೋಲಿಕೆ ಸರಿಯಲ್ಲ:

ಶಾಲೆಗಳಲ್ಲಿ ಎನ್‍ಇಪಿ ಅನುಷ್ಠಾನದ ಕುರಿತ ಪ್ರಶ್ನೆಗೆ ಮುಂದಿನ ವರ್ಷದಲ್ಲಿ ಪ್ರಾಥಮಿಕ ಹಂತದಲ್ಲಿ ಅನುಷ್ಠಾನ ಮಾಡಲಾಗುವುದು ಎಂದ ಸಚಿª ಬಿ.ಸಿ.ನಾಗೇಶ್ ಅವರು ಶಾಲೆ ನವೀಕರಣದ ಕುರಿತು ರೂಪ್ಸಾದವರ ಪ್ರತಿಭಟನೆ ಹೇಳಿಕೆ ಕುರಿತಂತೆ ಶಾಲೆ ನವೀಕರಣದ ಆದೇಶ ನಮ್ಮ ಸರಕಾರ ಬಂದ ಮೇಲೆ ಮಾಡಿದ್ದಲ್ಲ. ಹಿಂದಿನ ಸರಕಾರದಲ್ಲೇ ಪ್ರತೀ ವರ್ಷ ಹೊರಡಿಸುತ್ತಾ ಬಂದಿದ್ದಾರೆ.ರೂಪ್ಸಾದವರು ಸರಕಾರಿಶಾಲೆ, ಖಾಸಗಿ ಶಾಲೆಯನ್ನು ಹೋಲಿಕೆ ಮಾಡುವುದು ಬಿಡಲಿ. ನಮ್ಮ ಮಕ್ಕಳು ಗ್ರೌಂಡ್‍ಫ್ಲೋರ್‍ನಲ್ಲೇ ಇದ್ದು, ಶಾಲೆ ಬಿಟ್ಟರೆ ಹೊರಗಡೆ ಮೈದಾನದಲ್ಲಿರುತ್ತಾರೆ, ದೊಡ್ಡ ಕಾಂಪೌಂಡ್ ಕಟ್ಟಿ ಕೂಡಿಹಾಕಿಕೊಳ್ಳುವುದಿಲ್ಲ. ಗೈಡ್‍ಲೈನ್ಸ್ ಅನ್ನು ಒತ್ತಾಯಪೂರ್ವಕವಾಗಿ ಸರಕಾರ ಹೇರುತ್ತಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link