ಮುಂಬೈ:
ನಟಿ ಕಂಗನಾ ರನೌತ್ ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಕಲಾವಿದ ದಂಪತಿ ತಮ್ಮ ಮೇಲೆ ಬೇಹುಗಾರಿಕೆ ನಡೆಸಿದ್ದರು ಎಂದು ಆರೋಪಿಸಿ ಆ ದಂಪತಿಗೆ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಮೇಲೆ ಬೇಹುಗಾರಿಕೆ ಮಾಡಲಾಗುತ್ತಿದೆ ಎಂದು ಕಂಗನಾ ರಣಾವತ್ ಆರೋಪಿಸಿದ್ದು. ನನ್ನ ಬಗ್ಗೆ ಚಿಂತೆ ಮಾಡುತ್ತಿರುವವರಿಗೆ ಇದನ್ನ ಹೇಳುತ್ತಿದ್ದೇನೆ. ನಿನ್ನೆ ರಾತ್ರಿಯಿಂದ ನನ್ನ ಸುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದಿಲ್ಲ. ಕ್ಯಾಮರಾ ಅಥವಾ ಕ್ಯಾಮರಾಗಳಿಲ್ಲದೆ ಯಾರೂ ನನ್ನನ್ನ ಹಿಂಬಾಲಿಸುತ್ತಿಲ್ಲ. ಪದಗಳ ಮೂಲಕ ಅರ್ಥ ಮಾಡಿಕೊಳ್ಳದವರಿಗೆ, ವಿಷಯಗಳನ್ನು ಬೇರೊಂದು ಮಾರ್ಗದಲ್ಲಿ ಅರ್ಥ ಮಾಡಿಸಬೇಕಾಗುತ್ತದೆ’’ ಎಂದು ಇನ್ಸ್ಟಾಗ್ರಾಮ್ ನಲ್ಲಿ ಕಂಗನಾ ರಣಾವತ್ ಬರೆದುಕೊಂಡಿದ್ದಾರೆ.
ಚಂಗು – ಮಂಗುಗೆ ನನ್ನ ಸಂದೇಶ : ನೀವು ಹಳ್ಳಿಯಿಂದ ಬಂದವರನ್ನು ಎದುರಿಸುತ್ತಿಲ್ಲ. ನಿಮ್ಮನ್ನ ನೀವು ಸರಿಪಡಿಸಿಕೊಳ್ಳಿ ಎಂದು ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಇಲ್ಲವಾದ್ರೆ ನಿಮ್ಮ ಮನೆಗೆ ನುಗ್ಗಿ ನಿಮಗೆ ಹೊಡೆಯುತ್ತೇನೆ. ಕೆಲವರಿಗೆ ನಾನು ಹುಚ್ಚಿ ಎನಿಸಬಹುದು. ನಿಮಗೂ ಅನಿಸಬಹುದು ನಾನು ಹುಚ್ಚಿ ಅಂತ. ಆದರೆ, ನಾನು ಯಾವ ಮಟ್ಟಕ್ಕೆ ಹೋಗಬಹುದು ಎಂಬ ಅಂದಾಜು ನಿಮಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/Untitled-3-9.jpg)