ಕುಣಿಗಲ್ :
ಬೈಕಿನ ಡಿಕ್ಕಿಯಲ್ಲಿ ಲಕ್ಷಾಂತರೂ ಹಣವನ್ನು ಗ್ರಾಹಕನೋರ್ವನ್ನು ಇಟ್ಟು ಬ್ಯಾಂಕ್ ಗೆ ಹೋಗಿ ಬಂದು ನೋಡಲಾಗಿ ಯಾರು ದುಷ್ಕಕರ್ಮಿಗಳು ಹಣ ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಕೆಆರ್ ಎಸ್ ಅಗ್ರಹಾರದಲ್ಲಿ ಶುಕ್ರವಾರ ನಡೆದಿದೆ,
ರಾಮನಗರ ಜಿಲ್ಲೆ ಮಾಗಡಿ ತಾಲೂಕು ತಿಪ್ಪಸಂದ್ರ ಹೋಬಳಿ ಚಿಕ್ಕಕಲ್ಯಾ ಕಾಲೋನಿ ವಾಸಿ ಶಿವಕುಮಾರ್( 30) ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ,
ಶಿವಕುಮಾರನ್ನು ಕುಣಿಗಲ್ ಪಟ್ಟಣದ ಕೆಆರ್ ಎಸ್ ಅಗ್ರಹಾರದ ಎಸ್ ಬಿಐ ಸೇವಾ ಕೇಂದ್ರಕ್ಕೆ ಹಣ ಕಟ್ಟಲು ಬಂದು ಕೆಲಸ ಇದ್ದ ಕಾರಣ, ಬೈಕ್ ಡಿಕ್ಕಿಯಲ್ಲಿ 2.97 ಲಕ್ಷ ಹಣ ಇಟ್ಟು ಎಸ್ ಐಬಿ ಬ್ಯಾಂಕ್ ಗೆ ಹೋಗಿ ಬಂದು ನೋಡಲಾಗಿ ಬೈಕ್ ನ ಡಿಕ್ಕಿ ಯಲ್ಲಿ ಇದ್ದ ಹಣ ಕಳವಾಗಿತ್ತು, ಇದರಿಂದ ಗಾಬರಿಗೊಂಡ ಶಿವಕುಮಾರನ್ನು ಅಕ್ಕ ಪಕ್ಕದವರನ್ನು ವಿಚಾರಿಸಿ ಹಣ ಸಿಗದ ಕಾರಣ ಕುಣಿಗಲ್ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
