ತೋಳನಕೆರೆಯಲ್ಲಿ ಬೋಟಿಂಗ್‌,ಕುದುರೆ ಸವಾರಿಗೆ ವಿಧ್ಯುಕ್ತ ಚಾಲನೆ

ಹುಬ್ಬಳ್ಳಿ

    ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅಭಿವೃದ್ದಿಪಡಿಸಲಾಗಿರುವ ಇಲ್ಲಿನ ತೋಳನಕೆರೆಯಲ್ಲಿ ಆರಂಭಿಸಲಾಗಿರುವ ಬೋಟಿಂಗ್‌ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ ಅವರೊಂದಿಗೆ ಬೋಟಿಂಗ್ ಮಾಡಿದರು.

    ನಂತರ ಮಾತನಾಡಿದ ಜೋಶಿ, ‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆರೆ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಆ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯಿಂದ ಈ ಕೆರೆಗೆ ಹೊಸ ರೂಪ ಸಿಕ್ಕಿದೆ’ ಎಂದರು. ಕೆರೆಯ ನೀರು ಕಲುಷಿತಗೊಂಡಿರುವುದು ಬಿಟ್ಟರೆ ಎಲ್ಲ ಸೌಲಭ್ಯಗಳು ಉತ್ತಮವಾಗಿವೆ. ಶಾಸಕ ಅರವಿಂದ ಬೆಲ್ಲದ ವಿಶೇಷ ಕಾಳಜಿ ವಹಿಸಿ ಬೋಟಿಂಗ್ ಸೌಲಭ್ಯ ಕಲ್ಪಿಸಿದ್ದಾರೆ’ ಎಂದು ಹೇಳಿದರು.

    ಒಳಚರಂಡಿ ನೀರು ಕೆರೆ ಸೇರುತ್ತಿದೆ. ಈ ಬಗ್ಗೆ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಸಂಸ್ಥೆ ಕ್ರಮ ಕೈಗೊಳ್ಳಬೇಕು. ನಿವಾಸಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲು ಜನಾಂದೋಲನ ರೂಪಿಸಬೇಕು. ಉದ್ಯಾನದಲ್ಲಿ ಮಕ್ಕಳಿಗಾಗಿ ಟಾಯ್‌ ಟ್ರೇನ್‌, ಕುದುರೆ ಸವಾರಿಯಂತಹ ಹಲವು ಸೌಲಭ್ಯಗಳಿವೆ. ಮುಂದಿನ ದಿನಗಳಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಒತ್ತು ನೀಡಬೇಕು. ಉದ್ಯಾನಕ್ಕೆ ಬರುವವರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

    ಇದೇ ವೇಳೆ ಟಾಯ್ ಟ್ರೇನ್, ಬೋಟಿಂಗ್, ಕುದುರೆ ಸವಾರಿ ಮತ್ತಿತರ ಮನರಂಜನಾ ಚಟುವಟಿಕೆಗಳು ಇಂದಿನಿಂದ ಆರಂಭಗೊಂಡಿದ್ದು ಹಾಗೂ ಶಾಸಕರು ಚಾಲನೆ ನೀಡಿದರು.

     ಪ್ರಕೃತಿ ಫೌಂಡೇಷನ್‌ ಹಾಗೂ ಚೈತನ್ಯ ಸ್ಪೋರ್ಟ್ಸ್‌ ಫೌಂಡೇಷನ್‌ ಉದ್ಯಾನದಲ್ಲಿ ವಾಟರ್‌ ಸ್ಪೋರ್ಟ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಟೆಂಡರ್ ಪಡೆದಿದೆ. ಮಕ್ಕಳಿಗೆ ಮಿನಿ ಈಜುಕೊಳದಲ್ಲಿ ಬೋಟಿಂಗ್ ಮತ್ತು ದೊಡ್ಡವರಿಗೆ ಕೆರೆಯಲ್ಲಿ ಬೋಟಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.

      ಕುದುರೆ ಸವಾರಿ ಮಾಡಿದ ಪ್ರಲ್ಹಾದ ಜೋಶಿ ಅವರು, ಟಾಯ್‌ ಟ್ರೇನ್‌ನಲ್ಲಿ ಸಂಚರಿಸಿದರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌.ಪಾಟೀಲ, ಮೇಯರ್ ವೀಣಾ ಬರದ್ವಾಡ, ಶಿವು ಮೆಣಸಿನಕಾಯಿ, ರಾಮಣ್ಣ ಬಡಿಗೇರ, ಸಂಜಯ ಕಪಟಕರ, ಪ್ರಕೃತಿ ಫೌಂಡೇಷನ್‌ ಅಧ್ಯಕ್ಷ ಪರಶುರಾಮ ಡಿ.ಪೂಜಾರ ಮುಂತಾದವರಿದ್ದರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link